tag:blogger.com,1999:blog-38086999925771624382024-02-08T17:18:28.232+05:30ವಿಜಯ ಪರ್ವವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.comBlogger29125tag:blogger.com,1999:blog-3808699992577162438.post-82234375830454937962016-09-24T11:30:00.000+05:302016-09-24T11:30:10.814+05:30ಕ್ಲಿಕ್ ಆಯ್ತು ಕವಿತೆ<div dir="ltr" style="text-align: left;" trbidi="on">
<a href="http://4.bp.blogspot.com/-8OJxLqaSONE/V-YWMzXI2CI/AAAAAAAADTw/orFXwjHD7PMUYIaNPurRWLLDfPugyKmBwCK4B/s1600/unnamed.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="320" src="https://4.bp.blogspot.com/-8OJxLqaSONE/V-YWMzXI2CI/AAAAAAAADTw/orFXwjHD7PMUYIaNPurRWLLDfPugyKmBwCK4B/s320/unnamed.jpg" width="240" /></a>ಬಾರದವನ ಬರುವಿಕೆಗಾಗಿ<br />
ಕಾದು ಕಲ್ಲಾಗುವ ಮೊದಲು<br />
ನೋಡೊಮ್ಮೆ ಹಿಂತಿರುಗಿ<br />
ಕಾದಿರುವೆ ನಿನ್ನದೊಂದು ಅಪ್ಪಣೆಗಾಗಿ<br />
ನಿನ್ನ ಬೆನ್ನ ಹಿಂದೆ ಆಡಿಕೊಳ್ಳುವವರ<br />
ನಾಲಿಗೆ ಸೀಳಲು<br />
<br />
ಮೌನ ಮುರಿದು<br />
ಮಾತಾಡಬೇಕಿದೆ ನೂರು ಮಾತು<br />
ಆದರೆ ನಿನ್ನ ಮಾತಲ್ಲೂ<br />
ಬರಿ ಅವನದ್ದೇ ನೆನಪು<br />
ಅವನ ನೆನಪುಗಳಲ್ಲಿ ಬಂದಿಯಾಗಿರುವ<br />
ನೀನವನ ಪ್ರೇಮಕೈದಿ<br />
ನಾನಿನ್ನ ಕಾವಲುಗಾರ<br />
ನಮ್ಮಿಬ್ಬರ ನಡುವೆ ಇನ್ನೆಂತಹ ಸಂಭಾಷಣೆ<br />
<br />
ಹೇಳಬೇಕಿದೆ ಜಗಕೆ ಸಾರಿ<br />
ಯೋಗ್ಯನಲ್ಲ ಅವನು ನಿನ್ನ ಕಾಯುವಿಕೆಗೆ<br />
ಆದರೆ ನೋಯಿಸಲಾರೆ ಅವನಂತೆ ನಾನು<br />
ಕಾಯುವೆ ನಿನ್ನೊಲುಮೆಗೆ ನಿನ್ನಂತೆ ಕಲ್ಲಾಗಿ<br />
<br />
ಅವನ ನೆನಪು ಬತ್ತಿ<br />
ಚಿಗುರೋಡೆಯುವುದು ನನ್ನ ಪ್ರೀತಿ<br />
ಕಾಯುವೆ ಅಲ್ಲಿಯವರೆಗೂ<br />
ನಿನ್ನ ಬೆನ್ನ ಹಿಂದಿನ ನೆರಳಾಗಿ<br />
ನಿನ್ನದೊಂದು ಒಪ್ಪಿಗೆಗಾಗಿ</div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-39055941861175596482016-07-29T23:11:00.000+05:302016-07-29T23:18:18.843+05:30ಕಾದಿರುವೆ ಬಿಡುಗಡೆಗಾಗಿ <div dir="ltr" style="text-align: left;" trbidi="on">
<h2 style="text-align: left;">
</h2>
<div class="separator" style="clear: both; text-align: center;">
<a href="https://1.bp.blogspot.com/-mM8YYd4bPIY/V5uTjvK8LmI/AAAAAAAADS0/_gbR7hLkEh4n4JbGJZ0kUu9gfMAmGZwTQCEw/s1600/b38a31229cf33f488c6450f3776fd87d.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="400" src="https://1.bp.blogspot.com/-mM8YYd4bPIY/V5uTjvK8LmI/AAAAAAAADS0/_gbR7hLkEh4n4JbGJZ0kUu9gfMAmGZwTQCEw/s400/b38a31229cf33f488c6450f3776fd87d.jpg" width="301" /></a></div>
<div style="text-align: left;">
ಕಳಚಿಬಿಡಲೆ ದೇಹ</div>
<div style="text-align: left;">
ಉಸಿರುಗಟ್ಟುತಿದೆ</div>
<div style="text-align: left;">
ತಿರುಗಲಾರೆ ಹೊತ್ತು</div>
<div style="text-align: left;">
ಸಾಕದರ ಋಣ</div>
<br />
ಹುಡುಕುತಿರುವೆ ಕನ್ನಡಿಯೊಳಗೂ<br />
ಅದರೊಳಗಿನ ನನ್ನನ್ನೆ<br />
ಕಂಡಿದ್ದು ಮತ್ತದೆ<br />
ಕೀವುಗಟ್ಟಿ ಜಿಣುಗುತ್ತಿರುವ<br />
ಯಾವ ಮದ್ದಿಗು ಮಾಯದ<br />
ಅದಕಂಟಿದ ಹುಣ್ಣುಗಳು<br />
ಜಾತಿ ಬಣ್ಣ ರೂಪ ಮತ್ತಿನ್ನೆಷ್ಟೊ<br />
<br />
ಆಹಾ ಏನದರ ತಳುಕು ಬಳುಕು<br />
ಅಂದ ಚೆಂದ ಸಿಂಗಾರ<br />
ಒಳಗಿನ ನನಗಲ್ಲವೆ<br />
ಗೊತ್ತದರ ಹುಳುಕು<br />
ಜಾತಿ ಬಣ್ಣ ರೂಪಾನುಸಾರ<br />
ಕಂಡವರಿಗೆ ತಗ್ಗಿ ಬಗ್ಗಿ<br />
ಹಲ್ಲುಗಿಂಜಿ ಮೇರೆವ<br />
ಅದರ ಸೋಗುಲಾಡಿತನ<br />
ಕೇಳಿದರೆ ಒಣ ಧಿಮಾಕು<br />
ನಿನಗೇನು ಗೊತ್ತು<br />
ಸಮಾಜದ ಕಟ್ಟು ಪಾಡು<br />
ನನ್ನಿಂದ ನೀನು<br />
ನಿನ್ನಿಂದ ನಾನಲ್ಲ<br />
ಅಬ್ಬಾ ಅದೆಷ್ಟು ಅಹಂಕಾರ<br />
<br />
ಗೊಂಬೆಯೊಂದು ಹಗ್ಗ ಕಳಚಿ<br />
ಸೂತ್ರಧಾರಿಯ ಕೈ ಕಟ್ಟಿ<br />
ತನ್ನಿಷ್ಟಬಂದಂತೆ ಕುಣಿದು<br />
ಗಹ ಗಹಿಸಿ ನಕ್ಕು<br />
ಸೊಕ್ಕಿ ಉಬ್ಬಿ ಮೆರೆದಂತೆ<br />
ನನ್ನಿರುವಿಕೆಗೆ ಸಾಕ್ಷಿಯಾದ<br />
ಆಕಾರವೇ ಸೆರೆಯಾಗಿಸಿ<br />
ತನ್ನೊಳಗೆನ್ನ ಬಂಧಿಸಿದೆ<br />
ಕಾದಿರುವೆ ಬಿಡುಗಡೆಗಾಗಿ!</div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com3tag:blogger.com,1999:blog-3808699992577162438.post-8618488795372728582013-08-28T22:30:00.000+05:302013-08-28T22:30:05.514+05:30ಇದೇನಾ ಪ್ರೀತಿ?<div dir="ltr" style="text-align: left;" trbidi="on">
ಊಟ ಸೇರದು<br />ದಾಹ ನೀಗದು<br />ನಿದ್ದೆ ಬಾರದು<br /><br />ಇದೇನಾ ಪ್ರೀತಿ?<br /><br />ಹೊತ್ತು ಸಾಲದು<br />ದಾರಿ ಸಾಗದು<br />ಮನಸ್ಸು ನಿಲ್ಲದು<br /><br />ಇದೇನಾ ಪ್ರೀತಿ?<br /><br />ನೆನಪು ಮಾಸದು<br />ಮಾತು ಮುಗಿಯದು<br />ಮೌನ ಕಾಡುವುದು<br /><br />ಇದೇನಾ ಪ್ರೀತಿ?<br /><br />ಬೆಂಕಿ ಸುಡದು<br />ಗಂಧ ಸೂಸದು<br />ಕನಸು ಕಮರದು<br /><br />ಇದೇನಾ ಪ್ರೀತಿ?<br /></div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-13738741138581431062013-06-18T01:41:00.002+05:302013-06-18T01:41:46.335+05:30ಸದಾ ಸುಂದರ ಗಾಂಧಾರಿ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-zc09EbLRr8Q/Ub9r9TSncmI/AAAAAAAADIs/kWjdOUTX2Js/s1600/gandhari.PNG" imageanchor="1" style="clear: right; float: right; margin-bottom: 1em; margin-left: 1em;"><img border="0" src="http://2.bp.blogspot.com/-zc09EbLRr8Q/Ub9r9TSncmI/AAAAAAAADIs/kWjdOUTX2Js/s1600/gandhari.PNG" /></a></div>
"<span id="goog_55660395"></span>ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ<span id="goog_55660396"></span>" ಕಾರಣವಿಲ್ಲದೆ ಇಷ್ಟವಾದ ಸಾಲಿದು. ಅದೇನೊ ಈ ಸಾಲು ಒಂತರ ಇಷ್ಟವಾಯ್ತು, ಗಾಂಧಾರಿಯ ಬಗೆಗಿನ ಕುತೂಹಲವು ಇದಕ್ಕೆ ಕಾರಣವಾಗಿರಬಹುದೇನೊ? ಗೊತ್ತಿಲ್ಲ. ಒಂದರ್ಥದಲ್ಲಿ ಮಹಭಾರತದಲ್ಲಿ ಬರುವ ಕುಂತಿ, ದ್ರೌಪದಿ ಮತ್ತು ಗಾಂಧಾರಿ ಎಲ್ಲರೂ ದುರಂತ ನಾಯಕಿಯರೇ. ಯಾರು ಆ ಪಾತ್ರಗಳ ಒಳಹೊಕ್ಕು ಅವುಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಪಾತ್ರಗಳಿಗೆ ಅವುಗಳ ಸೃಷ್ಟಿಕರ್ತನ ಧೋರಣೆಯನ್ನು ಒಪ್ಪದೆ ಬೇರೆ ವಿಧಿಯಿರಲಿಲ್ಲ. ಅವುಗಳ ಅಸಹಾಯಕತೆಯನ್ನು ಜನರು ಬೇರೆಯದೆ ರೀತಿಯಲ್ಲಿ ಅರ್ಥೈಸಿ ಕೊಂಡರು. ಹಾಗೆಯೇ ಗಾಂಧಾರಿ ಅಪ್ರತಿಮ ಸೌಂದರ್ಯವತಿಯಾಗಿದ್ದರು ಅವಳು ಸುದ್ದಿಯಾಗಿದ್ದು ಮಾತ್ರ ಅವಳ ಪಾತಿವ್ರತ್ಯಕ್ಕಾಗಿ ಮಾತ್ರ. <br /><br />ಗಾಂಧಾರಿ ಸೌಂದರ್ಯವತಿ, ಬುದ್ಧಿವಂತೆ ಮತ್ತು ಸುಸಂಸ್ಕೃತೆ. ಅವಳಿಗೂ ಎಲ್ಲರಂತೆ ವಯೋ ಸಹಜ ಅಕಾಂಕ್ಷೆಗಳಿದ್ದವು. ಸ್ವಚ್ಛಂದವಾದ ನೀರಿನ ಛಾಯೆಯಲ್ಲಿ ತನ್ನ ಸೌಂದರ್ಯವನ್ನು ಸವಿಯುತ್ತ ನೂರಾರು ಕನಸುಗಳನ್ನ ಕಾಣುತ್ತಿದ್ದಳು. ಸಖಿಯರು ಅವಳ ಸೌಂದರ್ಯವನ್ನು ಹೊಗಳುತ್ತ ಅವಳಲ್ಲಿ ನೂರಾಸೆ ಬಿತ್ತಿದ್ದರು. ಅವಳಿಗೂ ಪ್ರಾಯದ ಹುಡುಗಿಯರಂತೆ ಸುರಸುಂದರನನ್ನು ವರಿಸುವ ಆಸೆಯಿತ್ತು. ತನ್ನ ಅಪ್ರತಿಮ ಚೆಲುವನ್ನು ಪ್ರತಿ ಕ್ಷಣವು ಆರಾಧಿಸುವ ಮನ್ಮಥನ ಆಗಮನಕ್ಕೆ ಅವಳ ಮನ ಹಾತೊರೆಯುತ್ತಿತ್ತು. ಆದರೆ ಆದದ್ದೇನು? ಅವಳಿಗೆ ಸಿಕ್ಕಿದ್ದು ಒಬ್ಬ ಕುರುಡ. ಸೌಂದರ್ಯದ ಗಂಧ ಗಾಳಿ ಗೊತ್ತಿರದ ಹುಟ್ಟು ಕುರುಡ. ತನ್ನ ಸೌಂದರ್ಯವನ್ನು ತನ್ನಿಡಿ ಜನ್ಮದಲ್ಲಿ ಮತ್ತೆಂದು ನೋಡಿಕೊಳ್ಳಲಾಗಲಿಲ್ಲ ಅವಳಿಗೆ ಕಟ್ಟಿಕೊಂಡ ಕಣ್ಣ ಪಟ್ಟಿಯಿಂದಾಗಿ. <br /><br />ಕಣ್ಣಿದ್ದು ಕುರುಡಿಯಂತೆ ಬದುಕುವುದು ಅಂದರೆ ಸುಮ್ನೆನಾ? ಇದೆಲ್ಲಾ ಗಾಂಧಾರಿ ಇಷ್ಟಪಟ್ಟು ಮಾಡಿದ್ಳಾ? ಹೀಗಂತ ನನಗೂ ಅನ್ನಿಸಿದ್ದಿದೆ. ಆದರೆ ಎಸ್. ಎಲ್. ಭೈರಪ್ಪನವರ ’ಪರ್ವ’ ಓದಿದಾಗ ನನಗೆ ಕಂಡಿದ್ದು ಬೇರೆಯದೆ ಗಾಂಧಾರಿ. ಅವಳಿಗೆ ಕುರುಡನನ್ನು ವರಿಸಲು ಒಂದಿಷ್ಟು ಇಷ್ಟವಿರಲಿಲ್ಲ ಅದೊಂದು ಬಲವಂತದ ಮದುವೆ. ಮದುವೆ ತಪ್ಪಿಸಿಕೊಳ್ಳಲು ಗಾಂಧಾರಿ ಮಗುವಿನಂತೆ - ಅಪ್ಪ, ಆ ಕುರುಡನೊಂದಿಗೆ ಮದುವೆ ಮಾಡಿದರೆ ನಾನೆಂದು ಅವನ ಮುಖವನ್ನ ನೋಡುವುದಿಲ್ಲ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು. ಸ್ವಾರ್ಥ ಸಾಧನೆಗಾಗಿ ಅವಳಪ್ಪ, ಇನ್ನೂ ಹುಡುಗು ಬುದ್ಧಿ ನಾಲ್ಕಾರು ದಿನಗಳ ನಂತರ ಅವಳೇ ಕಣ್ಣಿಗೆ ಕಟ್ಟಿಕೊಂಡ ಬಟ್ಟೆ ಬಿಚ್ಚುತ್ತಾಳೆಂದು ಮಾಡಿದ ಒಲ್ಲದ ಮದುವೆ. ಅವಳ ಕಣ್ಣಿನ ಪಟ್ಟಿಗೆ ಜನರು ನೀಡಿದ ಬೇರೆಯದೆ ಬಿರುದು. ಒಲ್ಲದ ಗಂಡನಿಗಿಂತ ಒಲಿದು ಬಂದ ಪತಿವ್ರತೆ ಅನ್ನೊ ಬಿರುದನ್ನು ಉಳಿಸಿಕೊಳ್ಳುವ ಖಯಾಲಿಯೋ? ಒಟ್ಟಂತು ಅವಳೊಬ್ಬಳು ಪತಿವ್ರತೆಯಾದಳು. <b>ಅವಳ ಸೌಂದರ್ಯ ಮಾತ್ರ ಮುಳ್ಳಿನ ಗಿಡದಲ್ಲಿನ ಹೂವಿನಂತೆ ಬಾಡಿಹೋಯಿತು, ಸವಿಯುವ ಕಣ್ಣುಗಳಿಗದು ನಿಲುಕಲೆಯಿಲ್ಲ</b>. </div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-45786971923514928852013-05-30T23:31:00.000+05:302013-05-30T23:31:23.166+05:30ಮಳೆಯೇ ಹೀಗೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-jKszHpyPpGM/UaeTgbsJ6LI/AAAAAAAADIY/_mM1vjO7wpo/s1600/rain_photos_03.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="240" src="http://3.bp.blogspot.com/-jKszHpyPpGM/UaeTgbsJ6LI/AAAAAAAADIY/_mM1vjO7wpo/s320/rain_photos_03.jpg" width="320" /></a></div>
ಗಿಜಿಗಿಜಿ ರಸ್ತೆಗಳು<br />ತೊಟ್ಟಿಕ್ಕುವ ಹನಿಗಳು<br />ಬಣ್ಣಬಣ್ಣದ ಕೊಡೆಗಳು<br />ಈ ಮಳೆಯೇ ಹೀಗೆ<br /><br />ಸಿಗರೇಟಿನ ಬೆಚ್ಚಗಿನ ಹೊಗೆ<br />ಬಿಸಿ ಬಿಸಿ ಆಂಬೊಡೆ<br />
ಹೊಗೆಯಾಡುತ್ತಿರುವ ಕಾಫಿ<br />ಈ ಮಳೆಯೇ ಹೀಗೆ<br /><br />ಕೈಕೊಟ್ಟ ವಿದ್ಯುತ್<br />ಮೇಣಬತ್ತಿಯ ಬೆಳಕು<br />ಹಾಡುತ್ತಿರುವ ರೇಡಿಯೋ<br />ಈ ಮಳೆಯೇ ಹೀಗೆ<br /><br />ಬೆಚ್ಚಗಿನ ಅಪ್ಪುಗೆ<br />ಆರ್ಭಟಿಸುವ ಗುಡುಗು<br />ಕಾಗದದ ಹಡಗು<br />ಈ ಮಳೆಯೇ ಹೀಗೆ<br /><br />ಮಣ್ಣಿನ ಘಮಲು<br />ಉರುಳಿದ ಮರಗಳು<br />ಮನೆಹೊಕ್ಕ ನೀರು<br />ಈ ಮಳೆಯೇ ಹೀಗೆ<br /><br />ಒದ್ದೆಯಾದ ಮನಸ್ಸು<br />ಚಿಗುರೊಡೆದ ನೆನಪುಗಳು<br />ಹಸಿಬಿಸಿ ಕನಸುಗಳು<br />ಈ ಮಳೆಯೇ ಹೀಗೆ</div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-66039545922591552362012-12-29T19:50:00.000+05:302012-12-29T19:50:07.433+05:30ಬಲಿಪಶು<div dir="ltr" style="text-align: left;" trbidi="on">
<br />
<div class="separator" style="clear: both; text-align: center;">
</div>
<div class="separator" style="clear: both; text-align: center;">
</div>
<div class="separator" style="clear: both; text-align: center;">
</div>
<div class="separator" style="clear: both; text-align: center;">
</div>
<div class="separator" style="clear: both; text-align: center;">
<a href="http://3.bp.blogspot.com/-jb71p09d3lc/UN76e0T5jmI/AAAAAAAADG4/OvdhoYTStOs/s1600/sad.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="320" src="http://3.bp.blogspot.com/-jb71p09d3lc/UN76e0T5jmI/AAAAAAAADG4/OvdhoYTStOs/s320/sad.jpg" width="241" /></a></div>
ಲೋಕದ ಕಣ್ಣಿಗೆ<br />
ನಾನೊಂದು ಬಲಿಪಶು<br />
ಪಶುವಂತೆ ನನ್ನ<br />
ಎಳೆದೆಳೆದು ತಿಂದು<br />
ಹಸಿವ ನೀಗಿಸಿಕೊಂಡವರಾರೊ?<br />
ಆದರೆ ಪಶುವೆಂಬ ಬಿರುದು<br />
ಅಂಟಿಕೊಂಡಿದ್ದು ಮಾತ್ರ ನನಗೆ<br />
ನಾನೊಂದು ಬಲಿಪಶು!<br />
<br />
ಹೆತ್ತವರೆ ಬೇಡವೆಂದು<br />
ಕಾಡಿಗೆ ಅಟ್ಟಿರಲು<br />
ಅವನ ಕಷ್ಟಗಳಲಿ<br />
ಜೊತೆಗಿದ್ದ ನನಗೆ<br />
ಸಿಕ್ಕಿದ್ದಾದರೂ ಏನು?<br />
ಅವನ ಅನುಮಾನ ಮತ್ತು<br />
ಅವಮಾನಗಳ ಬಿಟ್ಟು<br />
ಲೋಕದ ಕಣ್ಣಿಗೆ ರಾಮ<br />
ದೇವನೆನಿಸಿದರು<br />
ಆ ಕ್ಷಣದಲ್ಲಿ ನನಗೆ<br />
ಅವನೊಬ್ಬ ಸಾಮಾನ್ಯ<br />
ಮನುಷ್ಯನಂತೆ ಕಂಡಿದ್ದ<br />
ಹೆಣ್ಣು ಸಹನಾಮಯಿಯಂತೆ,<br />
ಕರುಣಾಮಯಿಯಂತೆ,<br />
ಕ್ಷಮಯಾಧರಿತ್ರಿಯಂತೆ<br />
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!<br />
<br />
ಜೂಜಿಗೆ ದಾಸರಾಗಿ ಆಡಿದ್ದು<br />
ಅನುಭವಿಸಿದ್ದು ಆ ಐವರು<br />
ಅಣ್ಣತಮ್ಮಂದಿರಾದರು<br />
ನಿಜ ಅರ್ಥದಲ್ಲಿ ಸೋತಿದ್ದು ನಾನು<br />
ಹಂಚಿಕೊಳ್ಳಲೇನು ವಸ್ತುವೇ ನಾನು?<br />
ಗೊತ್ತಿಲ್ಲ ಅವರಿಗೆ<br />
ಹಂಚಿಕೊಂಡಿದ್ದು ಅವರು<br />
ಕೇವಲ ನನ್ನ ದೇಹವ<br />
ಹೃದಯದಲ್ಲಿ ನಾನಾರಿಗು<br />
ಕೊಟ್ಟಿರಲಿಲ್ಲ ಒಂದಿಂಚು ಜಾಗವ<br />
ಹೆಣ್ಣು ಸಹನಾಮಯಿಯಂತೆ,<br />
ಕರುಣಾಮಯಿಯಂತೆ,<br />
ಕ್ಷಮಯಾಧರಿತ್ರಿಯಂತೆ<br />
ಸಹಿಸಿಕೊಳ್ಳುತ್ತಿರಬೇಕು ಎಲ್ಲವ!<br />
<br />
ನನ್ನ ಭಾವನೆಗಳ ಬಲಿಪಡೆಯಲು <br />
ಸಮಾಜ ಕೊಟ್ಟ ಬಿರುದುಗಳು<br />
ಸಹನಾಮಯಿ, ಕರುಣಾಮಯಿ,<br />
ಕ್ಷಮಯಾಧರಿತ್ರಿ ಮತ್ತಿನ್ನೇನೊ?<br />
ಸಹಿಸಲಾರೆ, ಕರುಣಿಸಲಾರೆ,<br />
ಕ್ಷಮಿಸಲಾರೆ ನಾನೂ<br />
ಭಾವನೆಗಳಿವೆ ಎಲ್ಲರಂತೆ ನನಲ್ಲೂ<br />
ಆದರೆ ಕೇಳುವ ಕಿವಿಗಳಿಲ್ಲಷ್ಟೆ!<br />
<br />
ನನ್ನ ಭಾವನೆಗಳ ಕೊಂದು<br />
ಚಟ್ಟದಿ ಹೊತ್ತುಕೊಂಡು<br />
ಹೋಗಿದ್ದರು ಅವರು ಅಂದೆ<br />
ದೇಹ ಮಾತ್ರ ಉಳಿದಿತ್ತು! <br />
ಸತ್ತಿದ್ದೆ ನಾನು ಅಂದೆ<br />
ಇಂದು ಸತ್ತಿದ್ದು<br />
ಕೇವಲ ನನ್ನ ದೇಹ!<br />
</div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-78098036451874483642012-12-20T22:57:00.000+05:302012-12-20T22:57:51.977+05:30ಅವನಾಟ<div dir="ltr" style="text-align: left;" trbidi="on">
<div class="separator" style="clear: both; text-align: right;">
<a href="http://4.bp.blogspot.com/-QP2I6EpYK_k/UNNJcsCyVhI/AAAAAAAADGQ/9kaV2kAbXA0/s1600/img.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="206" src="http://4.bp.blogspot.com/-QP2I6EpYK_k/UNNJcsCyVhI/AAAAAAAADGQ/9kaV2kAbXA0/s320/img.jpg" width="320" /></a></div>
<div dir="ltr" style="text-align: left;" trbidi="on">
ಅವನಾಟವಂತೆ ಕೇಳಲಿಲ್ಲ<br />
ಯಾರು ನನ್ನ ಇಷ್ಟವ<br />
ಹುಟ್ಟಿಸು ಎಂದು ಕೇಳಿರಲಿಲ್ಲ<br />
ಆದರು ಅವ ಹುಟ್ಟಿಸಿದ<br />
<br />
ಹುಟ್ಟಿನೊಂದಿಗೆ ಬಿಟ್ಟಿರುವ<br />
ಬೆನ್ನ ಹಿಂದೊಂದು<br />
ಸಾವೆಂಬೋ ರಣಹದ್ದ<br />
ಸುಖವೋ ದುಃಖವೋ<br />
ಓಡುತ್ತಿರಬೇಕು<br />
ನಿಯಮದಂತೆ ಅವನ<br />
ಅಟ್ಟಿಸಿಕೊಂಡು ಬರುತಿದೆ<br />
ಹಸಿದ ಹಕ್ಕಿ<br />
ಸಿಕ್ಕವರ ಕುಕ್ಕಿ ಕುಕ್ಕಿ<br />
<br />
ಅಸಹ್ಯ ಹುಟ್ಟಿತೆ ಆತ್ಮಕ್ಕೆ<br />
ದೇಹದ ಮೇಲೆ?<br />
ಕುಂದಿತೆ ಶಕ್ತಿ ದೇಹಕ್ಕೆ<br />
ಆತ್ಮವನ್ನು ಹಿಡಿದಿಡಲು?<br />
ನಿನ್ನೆ ಜೊತೆಗಿದ್ದವರು ಇಂದಿಲ್ಲ<br />
ಹಾರಿತು ಆತ್ಮ ಎಲ್ಲಿಗೋ?<br />
ಮಣ್ಣಾಗಿದೆ ದೇಹ ಮಾತ್ರ ಇಲ್ಲಿಯೆ<br />
<br />
ಆಹಾರವಾಗಲೇ ಬೇಕಿದೆ<br />
ಹದ್ದಿಗೆ ಎಂದಾದರು<br />
ಅಂದಾಗುವುದು ಇಂದೆಯಾಗಲಿ<br />
ಏನು ವ್ಯತ್ಯಾಸ?<br />
ಗೊತ್ತಾಗಿದ್ದು ಹತ್ತಿರ ಹೋದಾಗಲೆ<br />
ಹದ್ದಲ್ಲ ಅದೊಂದು ಸುಂದರ ಪಾರಿವಾಳ<br />
ಹೊತ್ತು ತಂದಿದೆ ಅವನದ್ದೇ ಸಂದೇಶ<br />
ಆಟ ಮುಗಿಯಿತು ನೀನಿನ್ನು ಸ್ವತಂತ್ರ!<br />
<br /></div>
</div>
ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com2tag:blogger.com,1999:blog-3808699992577162438.post-33637883633256688112011-08-10T08:00:00.000+05:302011-08-10T08:05:57.498+05:30ಒಂದು ದೇಶ<iframe width="425" height="349" src="http://www.youtube.com/embed/VouAAsrytY4" frameborder="0" allowfullscreen></iframe>ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-193254596797777452011-02-13T14:00:00.000+05:302012-12-15T15:11:36.717+05:30ದ್ವೀಪವ ಬಯಸಿ<a onblur="try {parent.deselectBloggerImageGracefully();} catch(e) {}" href="http://3.bp.blogspot.com/-FgNdSYgrRBU/TVe3zCupx3I/AAAAAAAAC5Y/FWQKOpVgg8c/s1600/dattatri-small.jpg"><img style="float:left; margin:0 10px 10px 0;cursor:pointer; cursor:hand;width: 127px; height: 200px;" src="http://3.bp.blogspot.com/-FgNdSYgrRBU/TVe3zCupx3I/AAAAAAAAC5Y/FWQKOpVgg8c/s200/dattatri-small.jpg" border="0" alt=""id="BLOGGER_PHOTO_ID_5573125151428036466" /></a><br />ಭೀಕರ ರಣರಂಗದಲ್ಲಿ ಹೆಣಗಳ ನಡುವೆ ಯೋಧನೊಬ್ಬ ಹಿಡಿದ ಪುಸ್ತಕದ ಮುಖಪುಟದಲ್ಲಿದ್ದ ಬುದ್ಧನ ಚಿತ್ರ ಇನ್ನೂ ಕಾಡುತ್ತಿದೆ. ಬುದ್ಧನ ಮಂದಸ್ಮಿತ ನಗು ಕಣ್ಣಿಗೆ ಕಟ್ಟಿದಂತಿದೆ. "ದ್ವೀಪವ ಬಯಸಿ" ಓದಿ ಮುಗಿಸಿದ್ದರು ಇನ್ನೂ ಅದರ ಗುಂಗಿನಿಂದ ಹೊರಬರಲಾಗುತ್ತಿಲ್ಲ, ಒಂತರಾ hangover.<br /><br />ಇಲ್ಲಿ ಎಲ್ಲರದ್ದು ಹುಡುಕಾಟದ ಬದುಕು. ಎಲ್ಲರೂ ಹುಡುಕುತ್ತಿದ್ದಾರೆ, ಆದರೆ ಏನನ್ನ? ಎಲ್ಲರೂ ಕಾಲಿಗೆ ಗಾಲಿಕಟ್ಟಿಕೊಂಡವರಂತೆ ಓಡುತ್ತಿದ್ದಾರೆ, ಆದರೆ ಏಲ್ಲಿಗೆ? ಯಾರಿಂದ ತಪ್ಪಿಸಿಕೊಳ್ಳಲು? ಉತ್ತರವ ಹುಡುಕಲು ಒಳಹೊಕ್ಕಂತೆ ಒಂತರ ಹೇಸಿಗೆಯ ಭಾವ. ಬದುಕು ಅತ್ತಿ ಹಣ್ಣಿನಂತೆ ಮೇಲ್ನೋಟಕ್ಕಷ್ಟೇ ಚಂದ ಒಳಗೆ ಬರಿ ಹುಳುಕು, ಸಿಪ್ಪೆ ಬಿಡಿಸಲು ಬುಗು ಬುಗು ಹುಳಗಳು. <br /><br />"ದ್ವೀಪವ ಬಯಸಿ" ಕಾರ್ಪೋರೇಟ್ ಜಗತ್ತಿನ ಸುತ್ತ ಹೆಣೆದಿರುವ ಕಥೆಯಾಗಿರುವುದರಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ಕಥೆ ಗೊಲ್ಲರಹಳ್ಳಿಯಿಂದ ಶುರುವಾಗಿ ಲಾಸ್ಏಂಜಲಿಸ್ ಕಡೆಗೆ ಸಾಗುತ್ತ ಹೋಗುತ್ತದೆ. ಎಲ್ಲ ಪಾತ್ರಗಳು ಆಪ್ತವೆನ್ನಿಸುತ್ತವೆ. ಶ್ರೀಕಾಂತ್, ವಾಣಿ, ಫ್ರಾಂಕೋ, ಸಮಿಂದ್, ಹಷಿನಿ, ಅಶೋಕ್, ಸುಜಾತ ಹೀಗೆ ಎಲ್ಲರೂ ನಮ್ಮ ನಡುವೆ ಬೆರೆತು ಹೋಗುತ್ತಾರೆ. ನೋಡು ನೋಡುತ್ತಿರುವಂತೆಯೇ ನಮ್ಮ ಜೀವನದ ಸನ್ನಿವೇಶಗಳು ಕಥೆಯ ಸನ್ನಿವೇಶಗಳ ನಡುವೆ ಕಳೆದುಹೋಗುತ್ತವೆ. ನಮಗೆ ಅರಿವಿಲ್ಲದಂತೆಯೇ ನಾವು ಅದರೊಳಗಿನ ಒಂದು ಪಾತ್ರವಾದಂತೆ ಕೃಷ್ಣನ ಅಗಲಿಕೆಗೆ ಮಮ್ಮಲ ಮರಗುತ್ತೇವೆ, ಇನ್ಫೋವಾಯೆಜ್ ಕಂಪನಿಯಲ್ಲಿ layoff ಆಗುತ್ತಿರಲು ತಮ್ಮ ಸರದಿಗೆ ಕಾಯುತ್ತ conference room ಅಲ್ಲಿ ಕುಳಿತವರ ಮಧ್ಯ ನಾವು ಒಬ್ಬರಾಗಿ ಬಿಡುತ್ತೇವೆ. ಪ್ರತಿಯೊಬ್ಬರಿಗೂ ಅವರದ್ದೆ ಇತಿಹಾಸ, ಪ್ರತಿಯೊಬ್ಬರಿಗೂ ಅತ್ತು ಬಿಡಲು ಅವರದ್ದೇ ಆದ ಕಾರಣಗಳಿವೆ, ಆದರೆ ಯಾರು ಅಳುತ್ತಿಲ್ಲ. ಎಲ್ಲರೂ ಓಡುತ್ತಿದ್ದಾರೆ. ತಮ್ಮಿಂದ, ತಮ್ಮ ಅಂತರಾತ್ಮದಿಂದ ತಪ್ಪಿಸಿಕೊಂಡು, ಅದಕ್ಕೊಂದು ಸುಳ್ಳು ಸಬೂಬು ಕೊಟ್ಟು.<br /><br />ಜೀವನದಲ್ಲಿ ಪ್ರತಿ ಬಾರಿಯು ಗೆಲ್ಲಲೆಬೇಕಿಲ್ಲ. ಗೆಲುವು ಅನಿವಾರ್ಯವಲ್ಲ. ಗೆದ್ದವನಿಗೆ ಒಂದೆ ದಾರಿಯಾದರೆ ಸೋತವನಿಗೆ ನೂರೆಂಟು ದಾರಿಗಳು ತೆರೆದು ಕೊಳ್ಳುತ್ತವೆ. ಬದಲಾದ ಕಾರ್ಪೋರೇಟ್ ಜಗತ್ತಿನಲ್ಲಿ ಎಲ್ಲರಿಗೂ ತಮ್ಮ ಪ್ರಭುತ್ವ ಸಾದಿಸುವ ಹುಚ್ಚು. ಯಾರಿಗೂ ಯಾವುದನ್ನೂ scratch 'ನಿಂದ ಶುರು ಮಾಡಲು ಪುರುಸೊತ್ತು ಇದ್ದಂತಿಲ್ಲ. ದೊಡ್ಡ ದೊಡ್ಡ ಕಂಪನಿಗಳು ಸಮುದ್ರದ ತಿಮಿಂಗಲಿನಂತೆ ತಮ್ಮ ಹಸಿವನ್ನು ನೀಗಿಸಲು ಸಣ್ಣ ಪುಟ್ಟ ಕಂಪೆನಿಗಳನ್ನು ನುಂಗಿ ಜೀರ್ನವಾದಷ್ಟನ್ನು ದಕ್ಕಿಸಿಕೊಂಡು ಅಳಿದುಳಿದ ತ್ಯಾಜ್ಯವನ್ನ ಹೊರಕಕ್ಕುತ್ತವೆ. ಜನರು ಕೆಲಸ ಕಳೆದು ಕೊಂಡು ಬೀದಿಗೆ ಬೀಳುತ್ತಾರೆ. ಇದೊಂದು ಚದುರಂಗದಾಟವಿದ್ದಂತೆ. ನಾವು ವ್ಯವಸ್ಥೆಯ ಕೈಯಲ್ಲಿರುವ ಚದುರಂಗದ ದಾಳಗಳಿದ್ದಂತೆ. ಕೊನೆಗೆ ಆಟವನ್ನು ಗೆದ್ದರು, ಗೆಲುವನ್ನು ಸಂಭ್ರಮಿಸುವಂತಿಲ್ಲ. ಅಸಲಿಗೆ ಅದು ನಮ್ಮ ಗೆಲುವೇ? ಅಲ್ಲವೇ ಅಲ್ಲ. ನಾವು ವ್ಯವಸ್ಥೆಯ ಕೈಗೊಂಬೆಗಳಷ್ಟೇ. ನಾವು ಓಡುತ್ತಿರಬೇಕು ಮನಸ್ಸಿಗೆ ಮತ್ತೊಂದು ಸಬೂಬು ಹೇಳಿ. <br /><br />ಇಲ್ಲಿ ಎಲ್ಲರೂ ಅಲೆಮಾರಿಗಳು. ಅವನೊಬ್ಬ ಗಂಡಾಳು ಮತ್ತವಳು ಹೆಣ್ಣಾಳು. ಎಲ್ಲರೂ ಗುಳೆಯೆದ್ದು ಹೋಗುತ್ತಾರೆ. ಇದೆಂತಹ ಹಸಿವು? Capitalism ಪ್ರತಿಪಾದಿಸುವುದು ಇದನ್ನೇ "Greed is good, Greed is right, Greed works". ಎಲ್ಲರದ್ದು calculated life. ಇಲ್ಲಿ ಎಲ್ಲರೂ ಓಡುತ್ತಿದ್ದಾರೆ ಕನಸುಗಳ ಬೆನ್ನಟ್ಟಿ .<br /><br />ಕಥೆಯೊಳಗೆ ತೆರೆದುಕೊಳ್ಳುವ ಇಟಲಿಯ ಜಾನಪದ ಕಥೆ, ಶ್ರೀಲಂಕಾದ ಅಂತರಿಕ ಯುದ್ದ, ಫ್ರಾಂಕೋ ಮತ್ತು ಸಮಿಂದರ ಹವ್ಯಾಸವಾದ ಫೋಟೋಗ್ರಫಿ, ಮಹಿಂದನ ಡೈರಿ, ಯೊಸಿಮಿಟಿಯ ಸೌಂದರ್ಯ ಕಥಾ ಹಂದರವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತದೆ. <br /><br />ಒಟ್ಟಾರೆಯಾಗಿ ಒಂದು ಸುಂದರ ಕಾದಂಬರಿ. ಮನಸ್ಸಿಗೆ ಹತ್ತಿರವಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಓಡುತ್ತಿದ್ದಾರೆ, ಹಸಿದ ನಾಯಿ ಬೆನ್ನಟ್ಟಿರುವಂತೆ, ಆದರೆ ಎಲ್ಲಿಯವರೆಗೆ? ಎಲ್ಲರೂ ಹುಡುಕುತ್ತಿದ್ದಾರೆ, ಆದರೆ ಬುದ್ಧ ತಮ್ಮೊಳಗೆ ಇರುವುದನ್ನು ಮರೆತು. ಎಲ್ಲ ಮುಗಿದ ಮೇಲೆ ಮನಸ್ಸಲ್ಲಿ ಉಳಿಯುವುದು ಒಂದೇ "Where wealth accumulates, men decay".ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-71521759936392604112010-12-04T12:50:00.001+05:302010-12-06T10:25:13.864+05:30Meluha - ನಾ ಕಂಡಂತೆ<a onblur="try {parent.deselectBloggerImageGracefully();} catch(e) {}" href="http://2.bp.blogspot.com/_r-FpVGj0dPQ/TPoElot_uFI/AAAAAAAAC4M/YviXzuE-EXg/s1600/meluha-223x300.jpg"><img style="float: right; margin: 0pt 0pt 10px 10px; cursor: pointer; width: 149px; height: 200px;" src="http://2.bp.blogspot.com/_r-FpVGj0dPQ/TPoElot_uFI/AAAAAAAAC4M/YviXzuE-EXg/s200/meluha-223x300.jpg" alt="" id="BLOGGER_PHOTO_ID_5546750935692195922" border="0" /></a><br />ಅಲ್ಲೊಂದು ಇಡೀ ಸಾಮ್ರಾಜ್ಯ ಅವನ ಆಗಮನಕ್ಕಾಗಿ ನೂರಾರು ವರ್ಷದಿಂದ ಹಾತೊರೆಯುತ್ತಿದೆ. ಅದು ಅಂತಿಂತಹ ಸಾಮ್ರಾಜ್ಯವಲ್ಲ, ಸಾಕ್ಷಾತ್ ಶ್ರೀ ರಾಮ ಕಟ್ಟಿದ ಸಾಮ್ರಾಜ್ಯ. ಭಗವಂತ ರಾಮನಾಳಿದ ಪುಣ್ಯ ಭೂಮಿ. ಸೂರ್ಯವಂಶಿಯರ ದಕ್ಷ ಆಡಳಿತ ಹೊಂದಿರುವ ಸಾಮ್ರಾಜ್ಯ. ಮೆಲುಹ ಧರ್ಮಭೂಮಿ, ಕರ್ಮಭೂಮಿ ಅದೊಂದು ತಪೋಭೂಮಿ. ಮೆಲುಹ ಸ್ವರ್ಗವನ್ನೇ ನಾಚಿಸುವಂತಿತ್ತು. ಅಲ್ಲಿನ ಶಿಸ್ತು, ಸಹಬಾಳ್ವೆ ಅವರ ಶ್ರೀಮಂತಿಕೆ ನಮ್ಮ ಕಲ್ಪನೆಗೂ ಮೀರಿದ್ದು. ಆದರೆ ಅಲ್ಲಿ ಎಲ್ಲವೂ ಸರಿಯಾಗಿಲ್ಲ, ಅವರ ಜೀವನದಿ ಸರಸ್ವತಿ ಬತ್ತುತ್ತಿದೆ. ಅಸಹಾಯಕ ಪ್ರಜೆಗಳ ಮೇಲೆ ಬಯೋತ್ಪಾದಕ ದಾಳಿಗಳಾಗುತ್ತಿವೆ. ಅಲ್ಲಿನ ಬಯೋತ್ಪಾದಕ ದಾಳಿಗಳ ಹಿಂದೆ ಚಂದ್ರವಂಶಿಯರ ಕೈವಾಡವಿದ್ದಂತಿದೆ. ಸೂರ್ಯವಂಶಿ ಮತ್ತು ಚಂದ್ರವಂಶಿಯರ ಸಂಬಂಧ ಮೊದಲಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದೆ. ಅವರಿಗೆ ಯುದ್ದ ಹೊಸದೇನಲ್ಲ ಆದರೆ ಚಂದ್ರವಂಶಿಯರು ಕ್ಷತ್ರಿಯರಂತೆ ಧೈರ್ಯವಾಗಿ ಯುದಕ್ಕೆ ಬರುತ್ತಿಲ್ಲ ಬದಲಾಗಿ ವಾಮಮಾರ್ಗದಲ್ಲಿ ಅತ್ಯಂತ ಕ್ರೂರಿಗಳಾದ ನಾಗಾಗಳ ಸಹಾಯದಿಂದ ಮೆಲುಹದಲ್ಲಿ ಬಯೋತ್ಪಾದಕ ದಾಳಿ ಮಾಡುತ್ತಿದ್ದಾರೆ. ಇಂತಹ ಹೋರಾಟದಲ್ಲಿ ಅಧರ್ಮದ ವಿರುದ್ದ ಧರ್ಮವನ್ನು ಎತ್ತಿ ಹಿಡಿಯಲು ಮತ್ತು ತಮ್ಮನ್ನು ಮುನ್ನಡೆಸಲು ಅವನು ಬಂದೆ ಬರುವನು ಎಂದು ಮೆಲುಹ ನಿವಾಸಿಗಳು ಕಳೆದ ನೂರು ವರ್ಷಗಳಿಂದ ಕಾಯುತ್ತಿದ್ದಾರೆ. ಹಾಗಾದರೆ ಅವರು ಕಾಯುತ್ತಿರುವುದಾದರು ಯಾರಿಗೆ? ನೀಲಕಂಠನಿಗೆ! ಹೌದು ಸಾಕ್ಷಾತ ಮಹಾದೇವನಿಗೆ, ಪರಮಾತ್ಮ ಶಿವನಿಗೆ. ಶಿವ ಬರುವನೇ? ಬಂದರೂ ಅವನೇ ದೇವಾದಿದೇವ ಶಿವನೆಂದು ಮೆಲುಹ ನಿವಾಸಿಗಳು ಹೇಗೆ ಗುರುತಿಸುತ್ತಾರೆ? ಶಿವ ಸೂರ್ಯವಂಶಿಯರ ನಂಬಿಕೆಯಂತೆ ಧರ್ಮವನ್ನು ಎತ್ತಿ ಹಿಡಿಯುತ್ತಾನಾ? "THE IMMORTALS OF MELUHA" ಪುಸ್ತಕದ ಕಥಾ ಹಂದರವಿದು. Shiva Trilogy ಸರಣಿಯಲ್ಲಿ ಬಂದಿರುವ ಮೊದಲ ಪುಸ್ತಕ "THE IMMORTALS OF MELUHA".<br /><br />ಕಥೆ 1900 BC ಅಲ್ಲಿ ನಡೆಯುವುದಾದರು ಮೆಲುಹ ನಿವಾಸಿಗಳು ಎದುರಿಸುವ ಕಷ್ಟಗಳು ಬಿನ್ನವಾಗಿಲ್ಲ ಅವು ಪ್ರಸ್ತುತ ಸಮಾಜದಲ್ಲಿ ನಾವು ಎದಿರುಸುತ್ತಿರುವ ಸಮಸ್ಯಗಳಂತೆ ಕಾಣುತ್ತವೆ. ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು ಪೌರಾಣಿಕವಾದರೂ ಅವುಗಳಿಗೆ ಇಲ್ಲಿ ಒಂತರ ಹೊಸ ಜೀವ ನೀಡಲಾಗಿದೆ, simple ಆಗಿ ಹೇಳೋದಾದ್ರೆ ನಾವು ಅದನ್ನ ಉಹಿಸಿರಲಿಕ್ಕು ಸಾದ್ಯವಿಲ್ಲ even in our wildest dreams. ಹೌದು ಶಿವನ ಬಗ್ಗೆ ನಾವೆಷ್ಟೇ ತಿಳಿದಿದ್ದರೂ ಇಲ್ಲಿ ಎಲ್ಲವೂ ಬಿನ್ನ ಬಿನ್ನ. ಇಲ್ಲಿ ಶಿವ ಒಬ್ಬ Tibetan immigrant! ನಮ್ಮ ಕಲ್ಪನೆಗೂ ಮೀರಿದ್ದು ಅಲ್ವಾ? 'ಸೋಮರಸ', 'ಹರ ಹರ ಮಹಾದೇವ' ಜೈಕಾರ ಹುಟ್ಟಿಕೊಂಡ ಬಗೆ ಮತ್ತು 'ಓಂ' ಚಿನ್ಹೆಯ ಒಳಾರ್ಥ ಎಲ್ಲವೂ ಮುದ ನೀಡುತ್ತೆ. ಜೊತೆಗೆ ಶಿವ ಮತ್ತು ಸತಿಯ (ಪಾರ್ವತಿ) ನವಿರಾದ ಪ್ರೇಮ ಕಥೆ. ಅವರಿಬ್ಬರ ಪ್ರೇಮ ಕಥೆಯಲ್ಲೂ ಅಚ್ಚರಿ ಕಾದಿದೆ, ಸತಿಗೆ ಮೊದಲೆ ಮದುವೆಯಾಗಿದೆ ಮತ್ತವಳು ವಿಕರ್ಮ! <br /> <br />"THE IMMORTALS OF MELUHA" ಒಂದು ಸರಿ ಓದಲೇ ಬೇಕಾದ ಕಥೆ ಮತ್ತದು ಓದಿಸಿಕೊಂಡು ಹೋಗುತ್ತೆ ಕೂಡ.<br /><br />"THE IMMORTALS OF MELUHA" ಪುಸ್ತಕದ trailer ಅನ್ನು ಇಲ್ಲಿ ನೋಡಬಹುದು - <a href="http://shivatrilogy.com/theimmortalsofmeluha.html">Trailer film. </a><br /><br /><br />ಹೆಚ್ಚಿನ ಮಾಹಿತಿಗಾಗಿ - <a href="http://shivatrilogy.com/">Shiva Trilogy</a>ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-11417125744810700272010-08-06T02:04:00.000+05:302010-08-06T02:20:09.936+05:30ನಾನೂ ನನ್ನ mobileಪುಟ್ಟ ಪುಟ್ಟ display... ಪುಟ್ಟ ಪುಟ್ಟ keypad... ನನ್ನ ಪುಟ್ಟ display... ನನ್ನ ಪುಟ್ಟ keypad... ನಾನೂ ನನ್ನ mobile... ಈಗ ನನ್ನ ಪಾಲಿಗೆ ಉಳಿದಿರೋದು ಬರಿ ನೆನಪುಗಳಷ್ಟೆ. ನನ್ನ ಪುಟ್ಟ ಮೊಬೈಲು ಕಳೆದು ಹೋಗಿ ಇವತ್ತಿಗೆ ಸರಿಯಾಗಿ ಒಂದು ವಾರವಾಯಿತು. ಅದರ ನೆನಪಲ್ಲಿ ಈ ಪುಟ್ಟ ಲೇಖನ. ದಯವಿಟ್ಟು ಇದನ್ನು ಓದುವಾಗ ನೀವು ಕುಳಿತುಕೊಂಡಲ್ಲೆ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿ. ನನ್ನ ಮೊಬೈಲು ಎಲ್ಲೆ ಇದ್ದರು ಸುಖವಾಗಿರಲೆಂದು ತುಂಬು ಹೃದಯದಿಂದ ಹಾರೈಸಿ. ಹಾಗಂತ ನಾನು ಇದೆ ಮೊದಲ ಸರಿ ಮೊಬೈಲ್ ಕಳೆದುಕೊಂಡಿಲ್ಲ. ಕಳೆದ ಐದು ತಿಂಗಳಲ್ಲಿ ಇದು ಎರಡನೆ ಮೊಬೈಲು. ಮೊದಲು ಸರಿ ಕಳೆದ ಮೊಬೈಲು ಬೆಳೆದು ದೊಡ್ಡದಾಗಿತ್ತು ಬರೋಬ್ಬರಿ ನಾಲ್ಕು ವರ್ಷ ತುಂಬಿ ಐದರಲ್ಲಿ ಬಿದ್ದಿತ್ತು. ಸಾಕಷ್ಟು ಸರಿ ಎದ್ದು ಬಿದ್ರು ಗಟ್ಟಿಮುಟ್ಟಾಗಿತ್ತು, ನೋಡೋಕೆ ಒಳ್ಳೆ ಕ್ಯಾಮೆಲ್ ಕಂಪಾಸ ಬಾಕ್ಸ್ ಇದ್ದಂಗಿತ್ತು. ಕಳೆದರು ಪರವಾಗಿಲ್ಲ ಅದಕ್ಕೆ ಈ ಜಗತ್ತನ್ನು ಎದುರಿಸಿವಷ್ಟು ತಾಕತ್ತು ಮತ್ತೆ ಗಂಡೆದೆಯಿತ್ತು. ಆದರೆ ಈ ಸರಿ ಕಳೆದಿರುವುದು ಪುಟ್ಟ ಮೊಬೈಲು ಅಬ್ಬಬ್ಬ ಅಂದ್ರೆ ಅದಕ್ಕೆ ನಾಲ್ಕೈದು ತಿಂಗಳುಗಳಷ್ಟೆ. ಕರ್ರಗೆ ತೆಳ್ಳಗೆ ಮಿರ್ರನೆ ಮಿಂಚುತಿತ್ತು. ಈಗ ಎಲ್ಲಿದೆಯೋ? ಎನೋ? ಹೊತ್ತು ಹೊತ್ತಿಗೆ ಚಾರ್ಜ ಮಾಡ್ತಿದ್ದಾರೋ ಇಲ್ವೊ? ನನಗಂತು ಅದರದ್ದೆ ಚಿಂತೆಯಾಗಿದೆ. ಪಾಪ ಹಸುಗೂಸು. <br /><br />ನಮ್ಮ ಮನೆಯಲ್ಲಿ ಮೊದಲಿನಿಂದಲು ನನ್ನ ಮೊಬೈಲು ಅಂದ್ರೆ ಒಂತರ ಮಲತಾಯಿ ಧೋರಣೆ. ಮನೆಯಲ್ಲಿ ನೆಟವರ್ಕ ಸಿಗದಿದ್ದರೆ ಪಾಪ ಮೊಬೈಲಾದ್ರು ಏನು ಮಾಡಬೇಕು ಹೇಳ್ರಿ. ಆದ್ರೆ ಅದನ್ನ ಅರ್ಥ ಮಾಡಿಕೊಳ್ಳೋರು ಯಾರು ಇರಲಿಲ್ಲ. ನಂದು ಹೇಳಿ ಕೇಳಿ ವೊಡಾಫೋನ ನೆಟವರ್ಕ್ ಮನೆಯೊಳಗೆ ಒಂದು ಕಡ್ಡಿ ನೆಟವರ್ಕ್ ಕೂಡ ಬರೋಲ್ಲ. ನೆಟವರ್ಕ್ ಇರದ ನನ್ನ ಮೊಬೈಲು ತಾಯಿ ಇಲ್ಲದ ಕಂದಮ್ಮನಂತೆ ಒಂದು ಮೂಲೆಯಲ್ಲಿ ಬಿದ್ದಿರುತಿತ್ತು. ಅದನ್ನ ಎತ್ತಿ ಮುದ್ದಾಡಿ ಮಾತಾಡಿಸೋರು ಯಾರು ಇರಲಿಲ್ಲ. ನಾನೇ ಅದಕ್ಕೆ ಹೊತ್ತು ಹೊತ್ತಿಗೆ ಮುಖ ತೊಳೆದು ಹೊಸ ವಾಲಪೇಪರ ಹಾಕಿ ದಿನಕ್ಕೆ ಎರಡು ಬಾರಿ ಚಾರ್ಜು ಮಾಡ್ತಿದ್ದೆ. ಈಗ ಚಾರ್ಜರ್ ಮನೆಯಲ್ಲೇ ಇದೆ ಆದರೆ ಅದನ್ನ ಚುಚ್ಚಿಸಿಕೊಳ್ಳಲು ಯಾರು ಇಲ್ಲ. <br /><br />ಅವತ್ತು ಕೂಡ ಪ್ರತಿ ದಿನದಂತೆ ಕೆಲಸ ಮುಗಿಸಿಕೊಂಡು ಬಸ್ ಹತ್ತಿ ಮಡಿವಾಳದ ಹತ್ತಿರ ಬಂದು ಇಳಿದೆ. ಆದರೆ ಯಾಕೋ ಪ್ಯಾಂಟ ಜೇಬು ಖಾಲಿ ಖಾಲಿ ಅನ್ನಿಸ್ತು ನೋಡಿದ್ರೆ ನನ್ನ ಮೊಬೈಲೇ ಇಲ್ಲ. ನನಗೆ ಆ ಕ್ಷಣಕ್ಕೆ ಅದೊಂದು Breaking News! ಆದರೆ ಆ ಸುದ್ದಿನ ಮನೆಯವರ ಹತ್ತಿರ ಹಂಚಿಕೊಳ್ಳೋನ ಅಂದ್ರೆ ನನ್ನ ಹತ್ತಿರ ಮೊಬೈಲೇ ಇಲ್ಲ. ಮೊದಮೊದಲಿಗೆ ನನಗೆ ಇದು ವಿರೋದಪಕ್ಷದವರದೇ ಕೈವಾಡ ಅನ್ನಿಸಿದರು ಆಮೇಲೆ ಅವರೆಲ್ಲ ಬಳ್ಳಾರಿ ಕಡೆ ಪಾದಯಾತ್ರೆ ಮಾಡ್ತಾಯಿರೋದು ನೆನಪಾಗಿ ಅವರ ಕೈವಾಡ ಇರಲಿಕ್ಕಿಲ್ಲ ಅನ್ನೋದು ಖಾತ್ರಿಯಾಯಿತು. ನಂತರ ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇರಬಹುದೆನ್ನಿಸಿತು. ಹಾಗೇನೆ ಎಡಪಂತಿಯರ ಮತ್ತು ಕೇಸರಿ ಉಗ್ರರ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲವೆನ್ನಿಸಿತು. ಮುಖ್ಯಮಂತ್ರಿಗಳನ್ನ ಒತ್ತಾಯಿಸಿ ಲೋಕಾಯುಕ್ತ ತನಿಖೆ ಮಾಡಿಸಿದ್ರಾಯ್ತು ಅಂತ ಸಮಾದಾನ ಪಟ್ಟುಕೊಂಡೆ ಯಾಕಂದ್ರೆ ನಮ್ಮ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಬಿಲಕುಲ್ ಒಪ್ಪೊಲ್ಲ ಆಮೇಲೆ ಕಾಂಗ್ರೆಸ್ಸಿಗರ ತರ ನಾನೆಲ್ಲಿಗೆ ಪಾದಯಾತ್ರೆ ಮಾಡಲಿ. ಬಡವ ನೀನು ಮಡಿಗಿದಂಗಿರು ಅಂತ ನಮಗೆ ಲೋಕಾಯುಕ್ತರ ತನಿಖೆನೆ ಸಾಕು. ಮೊಬೈಲು ಕಳೆದು ಹೋಗಿರೊದು ಖಾತ್ರಿಯಾದ ಮೇಲೆ ಅಲ್ಲಿ ಇಲ್ಲಿ ಸುತ್ತಿ ಮನೆಗೆ ಹೋಗುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಬಾಗಿಲು ತೆಗೆದದ್ದೆ ನಮ್ಮಕ್ಕ ಎಷ್ಟು ಸರಿ ನಿನಗೆ ಫೋನ್ ಮಾಡೋದು, ಫೋನ ಎತ್ತೋಕೆ ಏನು ದಾಡಿ ಅಂತ ಮಹಾ ಮಂಗಳಾರತಿ, ಸಹಸ್ರ ನಾಮಾರ್ಚನೆಯನ್ನ ವೈಭವೊಯುತವಾಗಿ ನೆರವೆರಿಸಿದಳು. ನಾನು ರಾತ್ರಿ ಹನ್ನೊಂದು ಗಂಟೆಯಾದ್ರು ಮನೆಗೆ ಬರದೆ ಇರೋದು ಮತ್ತೆ ಫೋನ ರೀಸಿವ್ ಮಾಡದೆ ಇರೋ ಸುದ್ದಿ ಅದಾಗಲೆ ಇನ್ನೂರೈವತ್ತು ಕೀಲೊಮೀಟರು ದಾಟಿ ದಾವಣಗೆರೆ ಮುಟ್ಟಿಯಾಗಿತ್ತು. ನನ್ನ ಮೊಬೈಲು ಕಳೆದು ಹೋದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. <br /><br />ಆದರೆ ವಿಪರ್ಯಾಸವೆಂದರೆ ಈ ಸಾರಿ ನನ್ನ ಮೊಬೈಲು ಕಳೆದು ಹೋದ ಕಳಂಕ ನನ್ನ ಸಿಮ್ ಮೇಲೆ ಬಂದಿರೋದು. ನನ್ನ ನಂಬರೇ ಸರಿ ಇಲ್ಲವಂತೆ. ನನ್ನ ಸಿಮ್ ಬರೋಬ್ಬರಿ ಎರಡು ಮೊಬೈಲು ನುಂಗಿ ನೀರು ಕುಡಿದಿದೆಯಂತೆ. ಹಾಗೆ ಬಿಟ್ಟರೆ ಇನ್ನೂ ಎಷ್ಟು ಮೊಬೈಲು ಫೋನುಗಳ ಬಲಿ ತೆಗೆದುಕೊಳ್ಳುತ್ತೋ ಅಂತ ನಮ್ಮಮ್ಮ ಶಾಪ ಹಾಕಿದ್ರು. ಹಾಗೆನೆ ನನ್ನ ಮೊಬೈಲ್ ಫೋನಿನ ವಾಸ್ತು ಸರಿಯಾಗಿರಲಿಲ್ಲವಂತೆ. ಸಿಮ್ ಹಾಕುವ ಸ್ಲಾಟ್ ಈಶಾನ್ಯ ದಿಕ್ಕಿನಲ್ಲಿರಬೇಕಂತೆ ಮತ್ತು ಬ್ಯಾಟರಿ ತಲೆ ಉತ್ತರಕ್ಕಿರಬೇಕಂತೆ, ಕೀ ಪ್ಯಾಡು ಉದ್ದಕ್ಕು ಅಗಲಕ್ಕು ಸಮಾನವಾಗಿರಬೇಕಂತೆ. ಆದರೆ ನನಗು ದಿಕ್ಕುಗಳಿಗು ಮೊದಲಿನಿಂದಲು ಆಗಿಬರುವುದಿಲ್ಲ ಇವತ್ತಿಗೂ ನನಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಅಂದ್ರೆ ನಮ್ಮ physics ಮೆಡಮ್ ಇಡುತ್ತಿದ್ದ ಸರಪ್ರೈಸ್ ಟೆಸ್ಟಗಳು ನೆನಪಾಗುತ್ತೆ. ನನ್ನ ಪಾಲಿಗೆ ಉತ್ತರ ಅಂದ್ರೆ ಜಮ್ಮು ಕಶ್ಮೀರ ಮತ್ತೆ ದಕ್ಷಿಣ ಅಂದ್ರೆ ಕನ್ಯಾಕುಮಾರಿ. ಪೂರ್ವ ಮತ್ತು ಪಶ್ಚಿಮ ಇನ್ನೂ ನಿಗೂಡ. ಭಾರತ ನಕಾಶೆಯಲ್ಲಿ ಮಾತ್ರ ನಾನು ದಿಕ್ಕುಗಳನ್ನ ಗುರುತಿಸಬಲ್ಲೆ ಅಂತದರಲ್ಲಿ ಫೋನಿಗೆಲ್ಲ ವಾಸ್ತು ಅಂದರೆ ಮುಗಿಯಿತು ನನಗೆ ಅದಕ್ಕು ಒಬ್ಬ ಕನ್ಸಲಟಂಟ್ ಬೇಕಾಗುತ್ತೆ. <br /><br />ಆದರೆ ಒಂದು ಸಮಾದಾನದ ವಿಷಯವೆಂದರೆ ನನ್ನ ಮೊಬೈಲ್ ಫೋನ್ದು display ಹೋಗಿತ್ತು ಮತ್ತೆ ನಾನದನ್ನು ಇನ್ನೂ ರಿಪೇರಿ ಮಾಡಿಸಿರಲಿಲ್ಲ ಹಾಗೆ ನನ್ನ ಮುದ್ದಿನ ಅಳಿಯ ಅದನ್ನ ಒಮ್ಮೆ ಇಡ್ಲಿಗೆ ಅಂತ ರುಬ್ಬಿಟ್ಟಿದ್ದ ಹಿಟ್ಟಲ್ಲಿ ಅದ್ದಿ ತೆಗೆದಿದ್ದ ಮತ್ತೆ ಯುಗಾದಿಯಲ್ಲಿ ಅದಕ್ಕೆ ಎಣ್ಣೆ ಸ್ನಾನ ಮಾಡಿಸಿದ್ದ. ಸ್ನಾನ ಮಾಡಿಸಿಕೊಂಡು ಎರಡು ದಿವಸ ನನ್ನ ಮೊಬೈಲು ಕೊಮಾದಲ್ಲಿತ್ತು. ಅದೇನೊ ಮೊಬೈಲ್ ಹೋಮ ಮಾಡಿಸಿ ಉರಿಯುತ್ತಿರುವ ಅಗ್ನಿ ಕುಂಡಕ್ಕೆ ನನ್ನ ಸಿಮ್ ಹಾಕಬೇಕಂತೆ. ನೋಡಿ ನನ್ನ ಸಿಮ್ಗೆ ಆ ಸೀತಾ ಮಾತೆಯ ಪರಿಸ್ಥಿತಿ ಬಂದಿದೆ. ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾಗುತಿದೆ ನನ್ನ ಸಿಮ್. ನೋಡುವ ನನ್ನ ಸಿಮ್ ಸೀತೆ ಅಷ್ಟೆ ಪುನೀತೆಯಾಗಿದ್ದರೆ ಭೂಮಿ ಖಂಡಿತ ಬಾಯಿಬಿಡುವುದು. ನಾನು ಹೋಮ ಮಾಡಿಸುವೆ ಅಂದಹಾಗೆ ನೀವು ಮೌನಾಚರಣೆ ಮಾಡಲು ಮರೆಯಬೇಡಿ.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com4tag:blogger.com,1999:blog-3808699992577162438.post-21221991672955055602010-01-31T17:12:00.000+05:302010-12-02T10:14:14.499+05:30ಹೀಗೆ ಸುಮ್ಮನೆನೀನು ನಕ್ಕರೆ ಹಾಲು ಸಕ್ಕರೆ <br />ಅದಕ್ಕೆ ಇರಬೇಕು ಚಿನ್ನ <br />ನಿಮ್ಮ ಮನೆ ಮಂದಿಯೆಲ್ಲ 'diabetic'!<br /><br />***<br /><br />ಸರಕಾರವೇ ಹೇಳಿದೆ <br />ಆರತಿಗೊಂದು ಮಗಳು <br />ಕೀರ್ತಿಗೊಬ್ಬ ಮಗನಿರಬೇಕಂತೆ <br />ಅದಕ್ಕೆ ನನಗೆ ಇಬ್ಬರು ಹೆಂಡತಿಯರು <br />ಮೊದಲನೆಯವಳು ಆರತಿ <br />ಎರಡನೆಯವಳು ಕೀರ್ತಿ! <br /><br />***<br /><br />ಕಟ್ಟೆ ಕಟ್ಟುವೆ ನಾನೊಂದು ತಾಜಮಹಲ್ <br />ಕೂಡಿ ಬಾಳ್ವೆ ಮಾಡಲೊಂದು ಪ್ರೇಮ ಮಂದಿರ <br />ಪ್ರೀತಿಯ ಹೂಳಲೊಂದು ಗೋರಿಯನ್ನಲ್ಲ!<br /><br />***<br /><br />ಇದ್ದಾಗ ಮೂಸು ನೋಡದ ಮಕ್ಕಳು <br />ಸತ್ತಾಗ ಕಣ್ಣೀರಿಡುತ್ತಾರೆ!<br /><br />***<br /><br />ಪ್ರೀಯೆ ನನ್ನ ಬಿಟ್ಟು<br />ಹೋಗುವ ಮುನ್ನ<br />'Harpic' ಕೊಟ್ಟು ಹೋಗು <br />ನನ್ನೆದೆಯ ತುಂಬಾ ನಿನ್ನ <br />ಹೆಜ್ಜೆಯ ಗುರುತುಗಳಿವೆ <br /><br />***<br /><br />ಪ್ರೀತಿ ಪವಿತ್ರ ಆತ್ಮದಂತೆ <br />ಅದಕ್ಕೆ ಸಾವಿಲ್ಲ <br />ದೇಹದಿಂದ ದೇಹದೆಡಗೆ<br />ಅದರ ಪಯಣ <br />ಇವತ್ತು ಇವಳು <br />ನಾಳೆ ಇನ್ನ್ಯಾರೊ?<br /><br />***<br /><br />ಪ್ರೀತಿಸಿ ಮದುವೆಯಾಗಬೇಕಂತೆ <br />ಅದಕ್ಕೆ ನಾನವಳನ್ನ ಪ್ರೀತಿಸಿದೆ <br />ಇವಳನ್ನ ಮದುವೆಯಾದೆ! <br /><br />***<br /><br />ಸ್ನೇಹದಿಂದ ಪ್ರೀತಿ ಹುಟ್ಟಬಹುದು <br />ಆದರೆ ಪ್ರೀತಿಯಿಂದ ಸ್ನೇಹ ಹುಟ್ಟಲಾರದು<br /><br />***<br /><br />ಇದು ಕಲಿಗಾಲ ಸ್ವಾಮಿ <br />ಗುಡಿ ಗುಂಡಾರಗಳ ಬಿಟ್ಟು <br />ದೇವರು ಹಾದಿ ಬೀದಿಯ <br />ಕಾಂಪೌಂಡ್ ಗೋಡೆಗಳ ಮೇಲೆ <br />ಮೂಗು ಮುಚ್ಚಿ ಕೂತಿರುವನು <br />ಭಕ್ತರೆ ಕರುಣೆಯಿರಲಿ <br />ಅಭಿಷೇಕ ಮಾಡದಿದ್ದರೂ ಪರವಾಗಿಲ್ಲ <br />ದಯವಿಟ್ಟು ಮೂತ್ರ ವಿಸರ್ಜನೆ ಮಾಡಬೇಡಿ! <br /><br />***<br /><br />ನನ್ನ inbox ತುಂಬ<br />ಬರಿ ನೀ ಬರೆದ ಪತ್ರಗಳೆ<br />ಆದರೆ ಅವನೆಲ್ಲ ಓದುವಷ್ಟು <br />ಸ್ನೇಹ ಮಾತ್ರ ಉಳಿದಿಲ್ಲ ನೋಡು <br /><br />***<br /><br />ನಿದ್ದೆಯಲ್ಲಿರುವವರನ್ನ <br />ಬಡಿದೆಬ್ಬಿಸಬಹುದು<br />ಆದರೆ ನಿದ್ದೆಯಲ್ಲಿರುವಂತೆ <br />ನಟಿಸುವವರ ಎಬ್ಬಿಸಲಸಾದ್ಯ!<br /><br />***<br /><br />ಸಂಸಾರಿಗಳಿಗೆ ಹೆಂಡ ಅತಿಯಾದಾಗ <br />ಮೊದಲು ನೆನಪಾಗುವ ವಸ್ತು 'ಹೆಂಡ-ಅತಿ'! <br /><br />***<br /><br />ಗೀಣಿಯ ಹಿಡಿದು ತಂದು <br />ಪ್ರೀತಿಯಿಂದ ಮಾತು ಕಲಿಸಿದೆ <br />ಆದರೆ ಇಂದು ಅದು ನನ್ನನ್ನೆ <br />ಹಂಗಿಸುತಿದೆ ನೋಡಿದಿರಾ?<br /><br />***ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com4tag:blogger.com,1999:blog-3808699992577162438.post-58347675895146840252010-01-03T17:42:00.000+05:302012-12-15T15:13:41.583+05:30ಕೇಳಲೊಲ್ಲವು ಕಂಗಳುಹೇಗೆ ಹೇಳಲಿ ಗೊತ್ತಾಗದಾಗಿದೆ <br />ಕಾಡಿ ಬೇಡಿ ಕೈ ಮುಗಿದರು <br />ಕೇಳಲೊಲ್ಲವು ಕಂಗಳು <br /><br />ಬಂದ ಕಷ್ಟಗಳನ್ನೆಲ್ಲಾ ನುಂಗಿ <br />ಉಮ್ಮಳಿಸಿ ಬರುವ ದುಃಖವ ಹತ್ತಿಕ್ಕಿ <br />ಎದೆಯ ಕಟ್ಟೆ ಒಡೆಯದಂತೆ <br />ಕಲ್ಲ ಗೋಡೆ ಕಟ್ಟಿ <br />ಮುಖದ ಮೇಲೊಂದು <br />ಸುಳ್ಳು ನಗೆಯ ಚೆಲ್ಲಿದರು <br />ಕೇಳಲೊಲ್ಲವು ಕಂಗಳು <br />ಕಣ್ಣೀರ ಹಾಕುತಿವೆ<br /><br />ಹೀಗೇಕೆ ಕಾಡುತಿವೆ?<br />ಯಾರಿಗೇನು ಅನ್ಯಾಯ ಮಾಡಿರುವೆ?<br />ಎಲ್ಲಿಗೆ ಹೋಗಲಿ? ಯಾರಿಗೆ ಹೇಳಲಿ?<br />ಎಳ್ಳ ಕಾಳಷ್ಟು ಕರುಣೆಯಿಲ್ಲ <br />ಜೀವ ಹಿಂಡಿ ಕೊಲ್ಲುತಿವೆ <br /><br />ಹಳೆಯದನ್ನೆಲ್ಲಾ ಮರೆತು <br />ಗಂಟು ಮೂಟೆ ಕಟ್ಟಿ <br />ಹೊಸ ಕನಸ ಕಟ್ಟಲು <br />ಆ ಊರ ಬಿಟ್ಟು ಈ ಊರಿಗೆ ಬಂದು <br />ನೆಮ್ಮದಿಯಿಂದ ಕಣ್ಣು ಮುಚ್ಚಿದರು <br />ಮೊಂಡು ಬಿದ್ದಿವೆ ಕಂಗಳು <br />ಮತ್ತದೇ ಹಳೆಯ ಕನಸು ಕಾಣುತಿವೆ<br /><br />ಪ್ರೀತಿ ಕುರುಡಂತೆ ಕಣ್ಣಿಲ್ಲವಂತೆ<br />ವಿಪರ್ಯಾಸ ನೋಡಿ <br />ಕಣ್ಣಲ್ಲೇ ಪ್ರೀತಿ ಹುಟ್ಟಿದೆ <br />ಬದುಕು ಬಲು ಕ್ರೂರ <br />ಕಂಗಳ ಮುಂದೆಯೆ ಪ್ರೀತಿ <br />ಸತ್ತು ಬಿದ್ದರು <br />ನಂಬಲೊಲ್ಲವು ಕಂಗಳು <br />ಮತ್ತದೇ ಪ್ರೀತಿಯ ಹುಡುಕುತಿವೆ <br /><br />ಹೇಗೆ ಹೇಳಲಿ ಗೊತ್ತಾಗದಾಗಿದೆ <br />ಕಾಡಿ ಬೇಡಿ ಕೈ ಮುಗಿದರು <br />ಕೇಳಲೊಲ್ಲವು ಕಂಗಳುವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-68629547913944610882009-11-15T12:33:00.000+05:302009-11-15T13:15:10.925+05:30ಮಾತುಗಳೇಕೆ ಸತ್ತು ಹೋದವು?ಹತ್ತಿರವಿದ್ದರು ನಾವಿಬ್ಬರು <br />ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ <br />ನಡುವೆ ಸಾಗರದಷ್ಟು ಮೌನ <br />ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ <br />ನಿನ್ನ ಸನಿಹದಲ್ಲೂ ಏನಿದು <br />ಹೊಸ ತರಹದ ವಿರಹ <br /><br />ಮಾತುಗಳೇಕೆ ಸತ್ತು ಹೋದವು? <br /><br />ನಿನ್ನ ತುಟಿಗಳ ಸಿಹಿ ಸ್ಪರ್ಶಕೆ<br />ಎದೆಯ ಸೀಳಿ<br />ಚಿಮ್ಮಿ ಪುಟಿ ಪುಟಿದು <br />ಹೊರಹೊಮ್ಮುತ್ತಿದ್ದ ಸಪ್ತಸ್ವರ <br />ಇನ್ನೆಲ್ಲಿ ಮುರಿದು ಹೋದ <br />ಈ ಕೊಳಲಿನ ಚೂರುಗಳಲ್ಲಿ <br /><br />ಮಾತುಗಳೇಕೆ ಸತ್ತು ಹೋದವು?<br /><br />ಸಾಕಿನ್ನು ಕಣ್ಣೀರು<br />ಸತ್ತವರು ಬದುಕಿ ಬರಲಾರರು <br />ಕಟ್ಟಬೇಕಿದೆ ದೇಹಕ್ಕೊಂದು ಗೋರಿ <br />ಎದೆಯಲ್ಲಿ ಸೂತಕ <br />ಮಡಿಯುಟ್ಟು ದೀಪ ಹಚ್ಚಿ <br />ಬಿಟ್ಟು ಹೋದ ನೆನಪುಗಳ <br />ಎತ್ತಿ ಮುದ್ದಾಡಿ ಮಾತು ಕಲಿಸಬೇಕಿದೆ <br /><br />ಮಾತುಗಳೇಕೆ ಸತ್ತು ಹೋದವು?<br /><br /><br />- ವಿಜಯ್ <br />15th Nov 2009ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-8812402702832291312009-09-12T17:14:00.001+05:302009-09-12T18:18:39.108+05:30ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ<br />ಉತ್ತರವ ಹುಡುಕುವರಾರು?<br />ಒಳಗೊಳಗೆ ಸುಟ್ಟು ಬೂದಿಯಾಗಿರುವೆ<br />ಎದೆಯ ಕಿಚ್ಚು ಆರಿಸುವರಾರು?<br /><br />ದಿಕ್ಕಿಲ್ಲದ ದಾರಿಯಲ್ಲಿ<br />ನಡೆ ನಡೆದು ಸೋತಿರುವೆ<br />ನೀರಿಲ್ಲದ ಊರಿನಲ್ಲಿ<br />ನಾ ಬಿಕ್ಕುತಿರುವೆ<br /><br />ಹೇಳದಿರುವ ನೂರೆಂಟು ಮಾತುಗಳಿವೆ<br />ಕಿವಿಗೊಟ್ಟು ಕೇಳುವರಾರು?<br />ನನಸಾಗದೆ ಸತ್ತ ಕನಸುಗಳಿಗೆ<br />ಬೆಂಕಿ ಇಡುವರಾರು?<br /><br />ಊರ ಜಾತ್ರೆಯಲ್ಲು<br />ನಾ ಒಂಟಿಯಾಗಿರುವೆ<br />ನನ್ನದಲ್ಲದ ಊರಿನಲ್ಲಿ<br />ನನ್ನವರ ಹುಡುಕುತಿರುವೆ<br /><br />ನೋವುಗಳ ಭಾರ ತಾಳದೆ ಕುಸಿದಿರುವೆ<br />ಎತ್ತಿ ಹಿಡಿಯುವರಾರು?<br />ಪ್ರೀತಿಯ ಅರಸಿ ಸೋತು ಶರಣಾಗಿರುವೆ<br />ಅಪ್ಪಿ ಮುತ್ತಿಕ್ಕುವರಾರು?<br /><br />ಮುಖವಾಡದ ಬದುಕು<br />ಭಾವನೆಗಳಿಗೆಲ್ಲಿ ಬೆಲೆ<br />ದೇವರಿಲ್ಲದ ಗುಡಿಯಲ್ಲಿ<br />ನಾ ಹರಕೆ ಹೊತ್ತಿರುವೆ<br /><br />ನನ್ನೊಳಗೆ ನಾನೊಂದು ಪ್ರಶ್ನೆಯಾಗಿರುವೆ<br />ಉತ್ತರವ ಹುಡುಕುವರಾರು?<br />ಒಳಗೊಳಗೆ ಸುಟ್ಟು ಬೂದಿಯಾಗಿರುವೆ<br />ಎದೆಯ ಕಿಚ್ಚು ಆರಿಸುವರಾರು?ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com2tag:blogger.com,1999:blog-3808699992577162438.post-23084469813365832952009-06-27T18:32:00.000+05:302009-06-27T21:05:28.196+05:30ಇದೇನಾ ಪ್ರೀತಿ?ಅವಳಿಗಾಗಿ ಕಾಯುತ್ತ ಕುಳಿತೋನಿಗೆ ಕಣ್ಣುಗಳು ಮುಚ್ಚ್ಚಿದ್ದೆ ಗೊತ್ತಾಗಿರಲಿಲ್ಲ. ಇಷ್ಟೊತ್ತಿಗಾಗಲೇ ಬಂದಿರಬೇಕಿತ್ತು ಆದರೆ ಇವತ್ತ್ಯಾಕೋ ಅವಳಿನ್ನು ಬಂದಿರಲಿಲ್ಲ. ಅವಳು ಬಾಗಿಲು ತೆಗೆದು ಒಳಗೆ ಬಂದಾಗಲೇ ನನಗೆ ಎಚ್ಚ್ಚರವಾಗಿದ್ದು. ಬಿಗಿದಪ್ಪಿದ್ದ ಕಣ್ಣು ರೆಪ್ಪೆಗಳನ್ನ ಬಲವಂತವಾಗಿ ಬಿಡಿಸಿ ಅವಳತ್ತ ನೋಡಲು ಪ್ರಯತ್ನಿಸಿದ್ದೆ. ದಿನವು ಅವಳ ಮುಖದಲ್ಲಿರುತ್ತಿದ್ದ ಮಂದಹಾಸ ಇವತ್ತ್ಯಾಕೋ ಮಾಯವಾಗಿತ್ತು. ಅವಳ ಕಣ್ಣುಗಳು ಕೆಂಪಗಾಗಿದ್ದವು, ಅವಳೇನು ಹೇಳದಿದ್ದರೂ ಅವಳ ಕಣ್ಣಂಚಿನಲ್ಲಿದ್ದ ಒಂದು ಪುಟ್ಟ ಕಣ್ಣಿರ ಹನಿಯೇ ಸಾಕಾಗಿತ್ತು ನನ್ನ ಮನಸ್ಸು ಹೀಗೆ ಪರಿತಪಿಸಲು. <br /><br />ಅವಳನ್ನ ಏನಾಯಿತೆಂದು ಕೇಳೋಣ ಎನ್ನಿಸಿದರು ಬಾಯಿಬಿಟ್ಟು ಕೇಳುವಂತಿರಲಿಲ್ಲ ನಾವಿಬ್ಬರು ಮಾತು ಬಿಟ್ಟು ಅದಾಗಲೇ ಎರಡು ದಿನಗಳಾಗಿತ್ತು. ಮನಸ್ಸು ಕೇಳು ಎಂದರು ಬುದ್ದಿ ಕೇಳಲು ಬಿಡಲಿಲ್ಲ, ಕೇಳಿದರೆ ನಾನೇ ಸೋತಂತಾಗುತ್ತೆಂದು ಬಲವಂತವಾಗಿ ನನ್ನ ಕಣ್ಣುಗಳನ್ನ ಟಿವಿಯತ್ತ ತಿರುಗಿಸಿದೆ. ಆದರು ನನ್ನ ಮಾತನ್ನು ಮೀರಿ ನನ್ನ ಕಣ್ಣುಗಳು ಅವಳನ್ನೇ ನೋಡುತಲಿದ್ದವು.<br /><br />ಇಷ್ಟಾದರು ಅವಳ ತುಟಿ ಪಿಟಕ್ಕೆನ್ನಲಿಲ್ಲ ಬಾಗಿಲ ಹತ್ತಿರಿದ್ದ ಕುರ್ಚಿಯ ಮೇಲೆ ಕುಳಿತು ಇನ್ನೂ ಕಣ್ಣು ತಿಕ್ಕುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಎದ್ದು ಬೆಡ್ ರೂಮಿನೊಳಗೆ ಹೋದಳು. ಇದ್ದೆಲ್ಲದರ ನಡುವೆ ನಾನು ನನಗೆ ಏನು ಗೊತ್ತೆಯಾಗಿಲ್ಲ ಎಂಬಂತೆ ನಟಿಸಲು ಹೋಗಿ ಇನ್ನೂ ನಟಿಸಲು ಸಾದ್ಯವಿಲ್ಲ ಎನಿಸಿ ಇಷ್ಟೊತ್ತಾದರು ಅವಳು ರೂಮಿನಿಂದ ಹೊರಗೆ ಬರದಿದ್ದನ್ನು ನೋಡಿ ಅವಳಿದ್ದಲ್ಲಿಗೆ ನಾನೇ ಹೊರಟೆ. <br /><br />ಅವಳು ಕನ್ನಡಿಯ ಮುಂದೆ ನಿಂತಿದ್ದಳು ನಾನು ಬಂದಿದ್ದು ಗೊತ್ತಾಗಿಯೋ ಏನೋ ಅಲ್ಲಿಯೇ ಇದ್ದ ವಸ್ತ್ರದಿಂದ ಕಣ್ಣುಗಳನ್ನು ಬಿಗಿಯಾಗಿ ಒತ್ತಿ ಹಿಡಿದಳು. ನನಗೆ ಇನ್ನಷ್ಟು ಹಿಂಸೆಯಾಯಿತು ಕಾಲುಗಳು ನಡುಗಿ ಗಂಟಲು ಒಣಗಿದಂತಾಗಿ ಹೊಟ್ಟೆ ಹಿಂಡಿ ಬಂದಂತಾದರು ಅವಳಿಗೆ ಗೊತ್ತುಪಡಿಸದಂತೆ ಅಲ್ಲಿಯೇ ಇದ್ದ ನ್ಯೂಸ ಪೇಪರನ್ನು ಎತ್ತಿಕೊಂಡು ಬಂದು ಬಿಟ್ಟೆ. ಮತ್ತೆ ಕುರ್ಚಿಯ ಮೇಲೆ ಕುಳಿತು ನ್ಯೂಸ್ ಪೇಪರ್ ಓದಲು ಕುಳಿತವನಂತೆ ನಟಿಸಿದೆ. <br /><br />ಮನಸ್ಸು ಕೇಳಲಿಲ್ಲ ಏನಾದರು ಮಾಡಲೆಬೇಕೆನ್ನಿಸಿ ಅಡುಗೆ ಮನೆಯೊಳಗೆ ಹೋಗಿ ಚಹಾ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು lighter'ಗಾಗಿ ಹುಡುಕಾಡಿದೆ. ಹಾಳಾದ್ದು lighter ಸಿಗಲೇ ಇಲ್ಲ. ದೇವರ ಮನೆಯೊಳಗೆ ಹೋಗಿ ಕಡ್ಡಿ ಪೊಟ್ಟಣವನ್ನು ತಂದು ಕಡ್ಡಿ ಗೀರಿದೆ. ಫ್ರೀಜ್'ನೊಳಗಿಂದ ಹಾಲನ್ನು ತೆಗೆದು ಎಷ್ಟು ಹಾಕಬೇಕೆಂದು ಗೊತ್ತಾಗದೆ ಇಷ್ಟೂ ಹಾಲನ್ನು ಸುರಿದು ಬಿಟ್ಟೆ. ಪಾತ್ರೆ ಕಾದಿತ್ತೇನೋ ಹಾಲು ಹಾಕುತ್ತಿದ್ದಂತೆ ಚೋರ ಎಂದು ಸದ್ದು ಮಾಡಲು ನನ್ನ ಹೊಟ್ಟೆಯೇ ಚೋರ ಎಂದಂತಾಯಿತು. ಮಾಡುವಿನಲ್ಲಿದ್ದ ಡಬ್ಬಗಳಲ್ಲಿ ಸಕ್ಕರೆಗಾಗಿ ಹುಡುಕಾಡುವಷ್ಟರಲ್ಲಿ ಹಾಲು ಉಕ್ಕಿ ಹರಿದಿತ್ತು. ಕೊನೆಗೂ ಕಷ್ಟ ಪಟ್ಟು ಚಲ್ಲಿದ ಹಾಲಲೆನ್ನಾ ಬಳಿದು ಸಕ್ಕರೆ ಚಹಾಪುಡಿ ಹಾಕಿ ನೋಡಲು ಚಹದಂತಿದ್ದ ಚಹವನ್ನು ಎರಡು ಕಪ್ಪುಗಳಲ್ಲಿ ಸೋಸಿ ಅವಳಿಗೆ ಕೊಡಲು ಓಡಿದೆ.<br /><br /><br />ಅಷ್ಟರಲ್ಲಾಗಲೇ ಅವಳು ಮುಖವನ್ನು ತೊಳೆದು ದೇವರ ಮುಂದೆ ದೀಪವನ್ನು ಹಚ್ಚುತ್ತಲಿದ್ದಳು. ನಮ್ಮ ನಡುವೆ ಮೌನವೇ ಮಾತಾಗಿತ್ತು. ಅವಳ ಮುಂದೆ ಕಪ್ಪನ್ನು ಹಿಡಿದು ಸುಮ್ಮನೆ ನಿಂತೆ. ಅವಳು ಒಂದು ಮಾತನ್ನು ಆಡದೆ ಕಪ್ಪನ್ನು ತೆಗೆದುಕೊಂಡಳು ನಾನು ನನ್ನ ಕಪ್ಪನ್ನು ತರಲು ಅಡುಗೆ ಮನೆಗೆ ಹೋಗಿ ಬರುವಷ್ಟರಲ್ಲಾಗಲೇ ಅವಳು ಚಹಾ ಕುಡಿದು ಮುಗಿಸಿಬಿಟ್ಟಿದ್ದಳು. ನಾನು ಇನ್ನೇನೂ ಮಾಡಲಾಗದೆ ತಣ್ಣಗಾಗಿದ್ದ ಚಹವನ್ನು ಒಂದೇ ಗುಟುಕಿನಲ್ಲಿ ಕುಡಿದು ಬಿಟ್ಟೆ. <br /><br />ಪುಸ್ತಕ ಓದುತ್ತ ಕುಳಿತಿದ್ದವಳು ಗಡಿಯಾರವನ್ನೊಮ್ಮೆ ನೋಡಿ ಅಡುಗೆ ಮಾಡಲು ಒಳಗೆ ಹೋದಳು. ನನ್ನ ಮನಸ್ಸಲ್ಲಿನ್ನು ಬರಿ ಪ್ರಶ್ನೆಗಳೇ. ತಳಮಳ ತಡೆಯಲಾಗದೆ ಅಡುಗೆ ಮನೆಯ ಬಾಗಿಲ ಬಳಿ ಹೋಗಿ ನಿಂತೆ. ಅವಳು ಸಾರಿಗೆ ಒಗ್ಗರಣೆ ಹಾಕಿ ಮುಗಿಸಿದಳು. ಒಗ್ಗರಣೆಯ ಘಮ ಘಮ ವಾಸನೆ ಮನೆ ತುಂಬಾ ಹರಡಿತ್ತು. ಬಾಗಿಲ ಬಳಿ ನಿಂತಿದ್ದ ನನ್ನನ್ನು ನೋಡಿಯು ನೋಡದಂತೆ ಹಾಲಿನಲ್ಲಿ ಹೋಗಿ ತಟ್ಟೆ ಬಡಿಸಿಟ್ಟಳು. ನಾನು ಹಿಂದಿನಿಂದ ನೀರನ್ನು ತುಂಬಿಕೊಂಡು ಹೋದೆ. ಕೈಗಳು ಯಾಂತ್ರಿಕವಾಗಿ ತಟ್ಟೆಯಲ್ಲಿದ್ದ ಅನ್ನವನ್ನು ತುತ್ತು ಮಾಡಿ ಬಾಯಿಯಲ್ಲಿ ಇಡುತ್ತಲಿದ್ದವು. <br /><br />ನನಗೆ ತಡೆಯಲಾಗಲಿಲ್ಲ ಮೌನವನ್ನ ಮುರಿದೆ ಬಿಟ್ಟೆ. ಅವಳಿಂದ ಕಣ್ಣುಗಳನ್ನ ಮರೆ ಮಾಡುತ್ತಾ "ಏನಾಯಿತು" ಅಂತ ಕೇಳಿಯೇ ಬಿಟ್ಟೆ. ಒಂದು ಕ್ಷಣ ಅವಳು ನಾನೇ ಮೊದಲು ಮಾತಾಡಿ ಬಿಟ್ಟೆ ಎಂಬುದನ್ನು ನಂಬಲಾಗದೆ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು. ನಾನು ಮತ್ತೆ ಕೇಳಿದೆ "ಯಾಕೆ ಏನಾಯಿತು? ಯಾಕೆ ಅಳ್ತಾಯಿದ್ದೆ?" ಅವಳು ಅದನ್ನ ನೀರಿಕ್ಷಿಸಿಯೇಯಿರಲಿಲ್ಲವೆಂಬಂತೆ "ಎಲ್ಲಿ ಯಾವಾಗ" ಎಂದು ಬಿಟ್ಟಳು. ನಾನು "ಮತ್ತೆ ನಿನ್ನ ಕಣ್ಣುಗಳು ಯಾಕೆ ಕೆಂಪಗಾಗಿದ್ದಾವೆ" ಎನ್ನಲು ಮರೆಯಲಿಲ್ಲ. ಅವಳು ತುಂಟ ನಗೆಯನ್ನು ಚಲ್ಲಿ "ಅದಾ, ಅದು ಇವತ್ತು ಮನೆಗೆ ಬರಬೇಕಾದರೆ ಹಾಳಾದ್ದು ಕಣ್ಣಲ್ಲಿ ಯಾವದೋ ಹುಳು ಹೊಕ್ಕಿತು" ಎನ್ನುತ್ತಾ ಉಂಡ ತಟ್ಟೆಗಳನ್ನ ಎತ್ತಿಕೊಂಡು ಒಳನಡೆದಳು.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com3tag:blogger.com,1999:blog-3808699992577162438.post-57457098544171774902009-04-12T13:55:00.000+05:302009-04-13T10:49:11.635+05:30ಇದು ಬದುಕು ಇದು ಸತ್ಯ - 2ಶ್ರಾವಣಿ ಎಲ್ಲೂ ಹೋಗಿಲ್ಲ. ಅವಳು ನನ್ನಲ್ಲೆ ಇದ್ದಾಳೆ. ನಾನಾಡುವ ಪ್ರತಿಯೊಂದು ಮಾತಿನಲ್ಲೂ, ನಾನೋಡುವ ಪ್ರತಿಯೊಂದು ವಸ್ತುವಿನಲ್ಲೂ, ನಾನು ಉಸಿರಾಡಿಸುವ ಪ್ರತಿ ಉಸಿರಿನಲ್ಲೂ, ನನ್ನ ಪ್ರತಿ ಕಣ ಕಣದಲ್ಲೂ. ಅವಳಾಡಿದ ಪ್ರತಿ ಮಾತು ನನಗಿನ್ನೂ ನೆನಪಿವೆ, ಅವಳಿಟ್ಟ ಪ್ರತಿ ಹೆಜ್ಜೆಯು ನನ್ನ ಹೃದಯದಲ್ಲಿ ಅಚ್ಚ್ಚಾಗಿ ಉಳಿದಿವೆ, ಅವಳೆದೆಯ ಒಂದೊಂದು ಬಡಿತ ಇವತ್ತಿಗೂ ನನಗೆ ಕೇಳಿಸುತ್ತಿದೆ.<br /><br />ಶ್ರಾವಣಿ ನನ್ನ ಜೀವನದಲ್ಲಿ ಶ್ರಾವಣದಂತೆ ಬಂದಿದ್ದಳು. ಹೊಸತನದ ಗಾಳಿ ಹೊತ್ತು ಪ್ರೀತಿಯ ಹಬ್ಬವನ್ನೇ ತಂದಿದ್ದಳು. ನಮ್ಮಿಬ್ಬರದ್ದು arranged ಮದುವೆಯಾಗಿತ್ತಾದರು ನಾವಿಬ್ಬರೂ ಯಾವ ಪ್ರೇಮಿಗಳಿಗಿಂತಲೂ ಕಡಿಮೆ ಇರಲಿಲ್ಲ. ವಯಸ್ಸಲ್ಲಿ ನನಗಿಂತ ಆರು ವರ್ಷ ಚಿಕ್ಕವಳಾಗಿದ್ದರು ನನಗಿಂತಲೂ ಹೆಚ್ಚು ಹೆಚ್ಚು ವಿಷಯ ತಿಳಿದು ಕೊಂಡಿದ್ದಳು. ರೂಪ, ಗುಣ, ಬುದ್ದಿವಂತಿಕೆ ಹೀಗೆ ಎಲ್ಲದರಲ್ಲೂ ನನಗಿಂತ ಮುಂದಿದ್ದಳು. ಪ್ರತಿಯೊಂದು ವಿಷಯ, ವಸ್ತು, ವ್ಯಕ್ತಿಗಳ ಬಗ್ಗೆ ಅದು ಹೀಗೆನೇ ಅಂತ predict ಮಾಡಿ ಬಿಡುತ್ತಿದ್ದಳು. <br /><br />ಮದುವೆ ಆಗಿ ಒಂದೇ ತಿಂಗಳಲ್ಲಿ ನಮ್ಮ ಇಡೀ ಮನೆಯ ಚಿತ್ರಣ ಬದಲಾಗಿಬಿಟ್ಟಿತ್ತು. ಅಮ್ಮನಿಗೆ ಕಳೆದ ಎರಡು ವರ್ಷಗಳಿಂದ ಹುಡುಕುತ್ತಿದ್ದ ತನ್ನ ಮುದ್ದಿನ ಸೊಸೆ ಸಿಕ್ಕ ಸಂಭ್ರಮ. ಅಡುಗೆ ಮನೆಯಲ್ಲಿ ಇಷ್ಟು ದಿವಸ ಒಂಟಿಯಾಗಿ ಕೆಲಸ ಮಾಡುತಿದ್ದವಳಿಗೆ ಈಗ ಶ್ರಾವಣಿ ಜೊತೆಯಾಗಿದ್ದಳು. ಅಮ್ಮ ತನ್ನ 35 ವರ್ಷಗಳ experienceನಲ್ಲಿ ಕಲಿತು ಕೊಂಡಿದ್ದ ಪ್ರತಿಯೊಂದು cooking tipsಗಳನ್ನ ತನ್ನ ಮುದ್ದಿನ ಸೊಸೆಗೆ ಕಲಿಸಿ ಕೊಡುವುದರಲ್ಲಿ busy'ಯಾಗಿಬಿಟ್ಟಿದ್ದಳು ಪ್ರತಿಫಲವಾಗಿ ಮನೆಯಲ್ಲಿ ಪ್ರತಿ ದಿನವು ಮ್ರುಸ್ಟಾನ್ನಾ ಭೋಜನ. ಅಪ್ಪನಿಗೂ ಅಷ್ಟೆ ಹೆಣ್ಣು ಮಕ್ಕಳೆಂದರೆ ಅದೇನೋ ವಿಶೇಷ ಪ್ರೀತಿ. ಅವಳಲ್ಲಿ ಮಗಳನ್ನ ಕಂಡಿದ್ದರು. ಪ್ರತಿ ದಿನ ಬೆಳಿಗ್ಗೆ ಅವರು easy chair'ನಲ್ಲಿ ಕುಳಿತು ಬಿಸಿ ಬಿಸಿ ಟೀ ಕುಡಿಯುತ್ತಲಿದ್ದರೆ ಎದುರಿಗೆ ಶ್ರಾವಣಿ ಅವತ್ತಿನ newspaper ಓದುತ್ತ ಕುಳಿತಿರಬೇಕು. ಒಟ್ಟಾರೆ ಇಡೀ ಮನೆ ಬದಲಾಗಿಬಿಟ್ಟಿತ್ತು. ಅಪ್ಪ ಇಲ್ಲಿಯ ತನಕ TV volume ಅನ್ನು ಹೆಚ್ಚಿಗೆ ಇಡಲು ಬಿಡದವರು ಈಗ ಹಾಡೆಂದರೆ ಶ್ರಾವಣಿಗೆ ಇಷ್ಟ ಅಂತ ಅವಳಿಗೆ ಅಡುಗೆ ಮನೆಯಲ್ಲೂ ಹಾಡು ಕೇಳಿಸಲಿ ಅಂತ TV volume ಅನ್ನು ಪಕ್ಕದ ಬೀದಿಯವರೆಗೆ ಕೇಳುವಷ್ಟು increase ಮಾಡಿದ್ದರು. ಅವಳು ತವರಿಗೆ ಹೋದರೆ ಮನೆಯಲ್ಲಿ ಸ್ಮಶಾನ ಮೌನ. ಅವಳು ಹೋದ ಒಂದೇ ಗಂಟೆಗೆ ಅಪ್ಪ ಫೋನ್ ಮಾಡಿ ಮನೆಗೆ ಬಂದು ಬಿಡು ಮಗಳೇ ಎಂದು ಮಕ್ಕಳಂತೆ ಅವಳ ದಾರಿ ಕಾಯುತ್ತ ಕುಳಿತುಕೊಳ್ಳುತ್ತಿದ್ದರು.<br /><br />ಆದರೆ ನಾನು ಮಾಡಿದ್ದಾದರೂ ಏನು? ನನ್ನ ಸುಖ ಸಂತೋಷಕ್ಕೆ ನಾನೇ ಕಲ್ಲು ಹಾಕಿಬಿಟ್ಟೆ. ಸ್ವರ್ಗದಂತಿದ್ದ ನನ್ನ ಜೀವನವನ್ನ ನಾನೇ ನರಕವನ್ನಾಗಿಸಿಕೊಂಡೆ? ನನ್ನ ಈ ತಪ್ಪಿಗೆ ಕ್ಷಮೆ ಇದೆಯಾ? ನಾನು ಪಾಪಿ. ಹೌದು ನಾನೊಬ್ಬ ಪಾಪಿ. ನನ್ನ ಶ್ರಾವಣಿಯನ್ನ ನಾನೇ ಕೊಂದು ಬಿಟ್ಟಿದ್ದೆ. <br /><br />(ಇನ್ನೂ ಇದೆ)ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-39401963705790998122009-03-08T19:03:00.000+05:302009-03-08T20:04:41.367+05:30ಇದು ಬದುಕು ಇದು ಸತ್ಯ - 1<a onblur="try {parent.deselectBloggerImageGracefully();} catch(e) {}" href="http://4.bp.blogspot.com/_r-FpVGj0dPQ/SbPJc44TQyI/AAAAAAAACNA/koJPE6qodUE/s1600-h/jail_bars2.jpg"><img style="float:right; margin:0 0 10px 10px;cursor:pointer; cursor:hand;width: 200px; height: 150px;" src="http://4.bp.blogspot.com/_r-FpVGj0dPQ/SbPJc44TQyI/AAAAAAAACNA/koJPE6qodUE/s200/jail_bars2.jpg" border="0" alt=""id="BLOGGER_PHOTO_ID_5310809883741995810" /></a><br />ಹೌದು ನಾನು ನನ್ನ ಜೀವನದ ಹದಿನಾಲ್ಕು ಅಮೂಲ್ಯ ವರ್ಷಗಳನ್ನ ಹೀಗೆ ನಾಲ್ಕು ಗೋಡೆಗಳ ಮದ್ಯ ಕಳೆದು ಬಿಟ್ಟೆ. ಇಲ್ಲಿಗೆ ಬಂದು ನಾಳೆಗೆ ಬರೋಬ್ಬರಿ ಹದಿನಾಲ್ಕು ವರ್ಷಗಳು. ಹೊರ ಪ್ರಪಂಚದಿಂದ ದೂರವಾಗಿ ಒಂದು ಜೀವಂತ ಶವದಂತಾಗಿ ಬಿಟ್ಟಿರುವೆ. ಭಾವನೆಗಳೇ ಇಲ್ಲದ ಖಾಕಿಗಳ ನಡುವೆ ನನ್ನ ಭಾವನೆಗಳನ್ನ ಮುಚ್ಚಿಟ್ಟು ಅವರ ಕಣ್ಣುಗಳ ತಪ್ಪಿಸಿ ಅವುಗಳನ್ನ ಕಾದಿಟ್ಟಿರುವೆ. ಬೆಳಗಿನ ಸೂರ್ಯ ಅವನ ಕಿರಣಗಳು ಮತ್ತೆ ಅವನನ್ನ ಬಾಚಿ ತಬ್ಬಿರುವ ಇಬ್ಬನಿ ಇವೆಲ್ಲಾ ಬರಿ ನೆನಪುಗಳು ಮಾತ್ರ. ಎಷ್ಟೋ ಸಾರಿ ನನ್ನ ಭಾವನೆಗಳ ಕಟ್ಟೆ ಒಡೆದು ಹರಿದದ್ದು ಉಂಟು. ಹಳೆಯ ನೆನಪುಗಳು ನಿದ್ದೆ ಬಾರದಂತೆ ಕಾಡಿದ್ದು ಉಂಟು. ಆದರೆ ಅದನ್ನೆಲ್ಲಾ ಇಲ್ಲಿ ಕೇಳೋರು ಯಾರು? ನಾನು ಅದೆನ್ನೆಲ್ಲಾ ಹೇಗೆ ಸಹಿಸಿಕೊಂಡೆ? ಇಲ್ಲಿನ ವಾತಾವರಣವೇ ಹಾಗೆ ಎಲ್ಲಾ ಕಲಿಸಿಬಿಡುತ್ತೆ. ನನ್ನ ದೇಹ ಕಲ್ಲಾಗಿಬಿಟ್ಟಿದೆ. ಆದರೆ ಮನಸ್ಸು? ಇಲ್ಲಾ, ನನ್ನ ಮನಸ್ಸು ಕಲ್ಲಾಗಿಲ್ಲ. ಅದು ಇವತ್ತಿಗೂ ಕಣ್ಣಿರಿಡುತ್ತೆ ಹಸಿದ ಮಗುವಿನಂತೆ. <br /><br />ಒಮ್ಮೊಮ್ಮೆ ಈ ನಾಲ್ಕು ಗೋಡೆಗಳ ಮದ್ಯ ಅದು ಹೇಗೆ ಒಬ್ಬನೇ ಹುಂಬನಂತೆ ಬದುಕಿ ಬಿಟ್ಟೆ ಅಂತ ಅನ್ನಿಸಿದ್ದು ಉಂಟು. ಆದರೆ ಪ್ರೀತಿನೆ ಹಾಗೆ ಇಡಿ ಪ್ರಪಂಚವನ್ನ ಎದಿರಿಸುವ ಹುಚ್ಚು ದೈರ್ಯವನ್ನ ಕೊಟ್ಟು ಬಿಡುತ್ತೆ. ಅಷ್ಟಕ್ಕೂ ನಾನು ಇವತ್ತಿಗೂ ಬದುಕಿರಲು ಶ್ರಾವಣಿ ಒಬ್ಬಳೇ ಕಾರಣ. ಶ್ರಾವಣಿಯ ನೆನಪುಗಳೇ ಸಾಕಾಗಿದ್ದವು ನಾನು ಉಸಿರಾಡಲು. ಅವಳೇನೋ ಭೂಮಿಯ ಮೇಲಿನ ತನ್ನ ಋಣವನ್ನ ತೀರಿಸಿ ಹೋಗಿಬಿಟ್ಟಳು ಆದರೆ ನಾನಿನ್ನು ಅವಳ ಋಣ ತೀರಿಸಬೇಕಲ್ಲಾ. ನಾನು ಅವಳಿಗೆ ಕೊಟ್ಟ ಎಷ್ಟೊಂದು ಮಾತುಗಳು ಇನ್ನೂ ಮಾತಾಗೆ ಉಳಿದಿದ್ದಾವೆ. ಅವೆಲ್ಲಾ ನೆಡಸಿ ಕೊಡಬೇಡವೇ ? <br /><br />ಈಗ ಹದಿನಾಲ್ಕು ವರ್ಷಗಳ ನಂತರ ಹುಟ್ಟುವ ಸೂರ್ಯ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಹರಿಯುವ ನೀರು ಮತ್ತೆ ನನ್ನವೆನಿಸಿವೆ. ಮನಸ್ಸು ಮತ್ತೆ ಮಗುವಿನಂತೆ ಖೂಷಿಪಟ್ಟಿದೆ. ಆ ಮನೆ ಮತ್ತೆ ನನ್ನನ್ನ ಮೊದಲಿನಂತೆ ಸ್ವಿಕರಿಸುತ್ತಾ? ಶ್ರಾವಣಿ ಇಲ್ಲದ ಆ ಮನೆಗೂ ಈ ನಾಲ್ಕು ಗೋಡೆಗಳು ಏನು ವ್ಯತ್ಯಾಸ? ಶ್ರಾವಣಿ ಇಲ್ಲದ ಆ ಮನೆಯಲ್ಲಿ ನಾನು ಬದುಕಿರಬಲ್ಲೇನಾ? ಈ ಮನಸ್ಸು ಹೀಗೇನೆ ಯಾವಾಗಲು ಕೆಟ್ಟದ್ದನ್ನೇ ಯೋಚಿಸುತ್ತೆ.<br /><br />(ಇನ್ನೂ ಇದೆ)ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com2tag:blogger.com,1999:blog-3808699992577162438.post-33134041204953384692009-01-18T12:42:00.000+05:302009-01-19T10:23:16.221+05:30ಬಾಳಿನ ದಾರಿಯಲ್ಲಿಅದೇನಾಯ್ತೋ ಗೊತ್ತಿಲ್ಲ ನಾನು ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿದ್ದೆ. ನನ್ನ ಕೈಯಲ್ಲಿದ್ದ ಬ್ಯಾಗ್ ಖಾಲಿಯಾಗಿತ್ತು. ರಸ್ತೆಯ ತುಂಬೆಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ರಸ್ತೆಯ ತುಂಬೆಲ್ಲ ಹರಡಿದ ವಸ್ತುಗಳಲ್ಲಿ ಹೊಳೆಯುವ ನಕ್ಷತ್ರದಂತಹ ಬಿಲ್ಲೆಗಳಿದ್ದವು, ಅದೆಂತದೋ ಬಂಗಾರದ ಬಣ್ಣದ ಪೆಟ್ಟಿಗೆ, ಬೆಳ್ಳಿಯದೊ ಬಂಗಾರದ್ದೋ ನಾಣ್ಯಗಳಿದ್ದವು (ಸ್ಪಷ್ಟವಾಗಿ ನೆನಪಿಲ್ಲ). ಆಗ ತಾನೇ ಮುದ್ರಣಗೊಂಡಂತಹ ಗರಿಗರಿಯಾದ ನೋಟುಗಳಿದ್ದವು. ಬೆಲೆ ಬಾಳಬಹುದಾದಂತಹ ಒಡವೆಗಳಿದ್ದವು. ಅಸಲಿಗೆ ಅವೆಲ್ಲಾ ನನ್ನವಾ? ಗೊತ್ತಿಲ್ಲಾ. <br /><br />ನನ್ನ ಸುತ್ತಲಿದ್ದ ಜನ ಅದ್ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿಕೊಂಡು ನನ್ನತ್ತ ನೋಡಿ ಗಹಗಹಿಸಿ ನಗುತ್ತಲಿದ್ದರು. ಅದರಲ್ಲೊಬ್ಬ ಸಿಗರೇಟ್ ಸೇದಿ ದಪ್ಪ ಹೋಗೆ ಬಿಡುತ್ತಲಿದ್ದ. ನಾನು ಮಾತ್ರ ರಸ್ತೆಯಲ್ಲಿ ಬಿದ್ದಿದ್ದ ವಸ್ತುಗಳನ್ನು ನನ್ನ ಚೀಲದಲ್ಲಿ ತುಂಬುತಲಿದ್ದೆ. ಸ್ವಲ್ಪ ದೂರದಲ್ಲಿ ಒಂದಷ್ಟು ಜನ ಬಿಕ್ಕಿ ಬಿಕ್ಕಿ ಅಳುತ್ತಲಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟುತಲಿತ್ತು. ಅದರಲ್ಲೊಬ್ಬ ಮಹಿಳೆ ನನ್ನತ್ತ ಕೈ ಮಾಡಿ ಕರೆದಂತಿತ್ತು. ನಾನು ಮಾತ್ರ ಅದ್ಯಾವುದರ ಪರಿವಿಲ್ಲದಂತೆ ರಸ್ತೆಯಲ್ಲಿ ಬಿದ್ದಿದ್ದ ಸಾಮಾನುಗಳನ್ನ ಚೀಲದಲ್ಲಿ ತುಂಬುತ್ತಲೇ ಇದ್ದೆ. ಇನ್ನೊಂದೆಡೆ ಒಂದು ಗುಂಪು ಒಬ್ಬ ಅಮಾಯಕನನ್ನ ಬೆನ್ನಟ್ಟಿ ಹೊರಟಿತ್ತು. ಅವರ ಕೈಯಲ್ಲಿ ಮೀರಿ ಮೀರಿ ಮಿಂಚುತ್ತಿದ್ದ ಮಚ್ಚುಗಳಿದ್ದವು. ನೋಡು ನೋಡುತ್ತಲೇ ಅವನು ಅವರ ಕೈಗೆ ಸಿಕ್ಕಿಬಿಟ್ಟ. ಅವರು ಅವನ ಕೈಯನ್ನ ತುಂಡರಿಸಿ ಬಿಟ್ಟರು. ಅವನ ಬಿಸಿ ರಕ್ತ ನಾನು ಆಯುತಲಿದ್ದ ನೋಟುಗಳ ಮೇಲು ಸಿಡಿದಿತ್ತು ಆದರು ಅದನ್ನ ನನ್ನ ಬಟ್ಟೆಗೆ ಒರಿಸಿಕೊಂಡು ನನ್ನ ಚೀಲದಲ್ಲಿ ಹಾಕಿಕೊಳ್ಳೊದನ್ನ ಮಾತ್ರ ನಾನು ಮರೆತಂತಿರಲಿಲ್ಲ. <br /><br />ಅಲ್ಲಿ ಒಬ್ಬರು ಸಹ ನನ್ನವರು ಇದ್ದಂತಿರಲಿಲ್ಲ. ಎಲ್ಲರೂ ನನ್ನನ್ನ ಜಾತ್ರೆಯ ತೇರಿನಂತೆ ನೋಡುತಲಿದ್ದರು. ಅಲ್ಲಿ ಯಾರಿಗೂ ನನ್ನ ಪರಿಚಯವಿದ್ದಂತೆ ಕಾಣಲಿಲ್ಲ. ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ಅಸಲಿಗೆ ಅವರೆಲ್ಲ ನನ್ನನ್ನ alien ತರಹ ನೋಡುತ್ತಲಿದ್ದರು. ಆದರು ಅದ್ಯಾಕೋ ನಾನು ಮೊಂಡು ಬಿದ್ದವನಂತೆ ಇನ್ನೂ ಚೀಲ ತುಂಬುತಲೇ ಇದ್ದೆ. <br /><br />ರಸ್ತೆಯಲ್ಲಿ ನಾನು ಹುಚ್ಚನಂತೆ ಹುಡುಕುತ್ತಲಿದ್ದರು ಅವರೆಲ್ಲ ನನ್ನ ಪರಿವಿಲ್ಲದಂತೆ ರಸ್ತೆಯಲ್ಲಿ ಓಡಾಡುತ್ತಲಿದ್ದರು. ಅದರಲೊಬ್ಬ ನನ್ನ ಕೈಯನ್ನ ತುಳಿದು ಬಿಟ್ಟಿದ್ದ. ನೋವಿನಿಂದ ಅವನತ್ತ ನೋಡಲು ಅವನು ಸಹ ಎಲ್ಲರಂತೆ ನನ್ನನ್ನು ನೋಡಿ ನಕ್ಕಿದ್ದ. ಆ ನಗು ಮತ್ತಷ್ಟು ನೋವು ಕೊಟ್ಟಿತ್ತು. ನೋಡು ನೋಡುತ್ತಿದ್ದಂತೆ ಕತ್ತಲೆ ಆವರಿಸಿತ್ತು. ರಸ್ತೆಯನ್ನ ಗೂಡಿಸಲು ಒಂದಿಬ್ಬರು ಮಹಿಳೆಯರು ಉದ್ದುದ್ದ ಪೊರಕೆ ಹಿಡಿದು ನಿಂತಿದ್ದರು. ನಾನು ಅವರನ್ನ ಎಷ್ಟೇ ಕೇಳಿಕೊಂಡರು ಅವರಿಗೆ ಕರುಣೆ ಇದ್ದಂತಿರಲಿಲ್ಲ ಅಲ್ಲಿದ್ದ ವಸ್ತುಗಳೆನ್ನೆಲ್ಲ ಗೂಡಿಸಿ ತಮ್ಮ ಕಸದ ಚೀಲ ತುಂಬುತಲಿದ್ದರು. ನನ್ನ ಕೂಗನ್ನ ಅಲ್ಲಿ ಯಾರು ಕೇಳುವವರಿರಲಿಲ್ಲ. ನಾನು ಮಾತ್ರ 'ನಂದು', 'ನಂದು' ಎಂದು ಚೀರುತ್ತಲೇ ಇದ್ದೆ. ಅಷ್ಟರಲ್ಲಿ ಎಲ್ಲಿಂದಲೋ ಬಂದ ಇಬ್ಬರು ಧಡೂತಿ ದೇಹದವರು ನನ್ನನ್ನ ದರದರನೆ ಎಳೆದು ರಸ್ತೆ ಬದಿಯಲ್ಲಿ ತಂದು ಹಾಕಿದರು. <br /><br />ನಾನು ಕಷ್ಟ ಪಟ್ಟು ತುಂಬಿದ್ದ ಚೀಲವನ್ನು ಸಹ ಅವರು ತಮ್ಮ ಕಸದ ಗಾಡಿಯಲ್ಲಿ ತುಂಬಿ ಕೊಂಡು ಹೋಗಿದ್ದರು. ನೋಡು ನೋಡುತ್ತಲೇ ಕಸದ ಗಾಡಿ ಮರೆಯಾಗಿ ಹೋಯಿತು. ನಾನು ಏಕಾಂಗಿಯಾಗಿ ಬಿದ್ದಿದ್ದೆ. ನನ್ನದು ಅಂತ ಅಲ್ಲಿ ಏನು ಉಳಿದಿರಲಿಲ್ಲ. ಆದರೆ ಮನಸ್ಸು ಮಾತ್ರ ನೀರಾಳವಾಗಿತ್ತು. ನನಗೆ ಈ ಸಂಸಾರದಿಂದ ಮುಕ್ತಿ ಸಿಕ್ಕಿತ್ತು. <br /><br />ಕೇಳಲು ಇದೊಂದು ಕನಸಿನಂತಿದ್ದರು ಇದು ಕನಸಲ್ಲ ಇದು ಸತ್ಯ. ನಾವು ನಮ್ಮ ಬಾಳ ದಾರಿಯಲ್ಲಿ ಜನ ಸಂದಣಿಯಲ್ಲಿ ಕಳೆದು ಹೋಗಿರುತ್ತೇವೆ. ಕೇವಲ ಲೌಕಿಕ ಸುಖಕ್ಕಾಗಿ ನಮ್ಮವರನ್ನ ಬಿಟ್ಟು ಅವರ ಕೈಗೂ ಎಟುಕದಷ್ಟು ದೂರ, ಬಹು ದೂರ ಬಂದು ಬಿಟ್ಟಿರುತ್ತೇವೆ. ನಮಗೆ ಗೊತ್ತು ಪರಿಚಯವಿಲ್ಲದ ಊರಲ್ಲಿ ಕಳೆದು ಹೋಗಿರುತ್ತೇವೆ. ನಮ್ಮವರ ಸಾವು ನೋವಿಗೂ ಸ್ಪಂದಿಸದಷ್ಟು ಬ್ಯುಸಿ ನಾವು. ನಮ್ಮ ಪಕ್ಕದಲ್ಲೆ ನಡೆಯುವ ಹಿಂಸೆ, ಅನ್ಯಾಯ, ಅತ್ಯಾಚಾರಗಳನ್ನ ಸಹಿಸಿಕೊಂಡು ಬಿಡುತ್ತೇವೆ. ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ ಅಂತ ಗೊತ್ತಿದ್ದರು ಹಣದ ಹಿಂದೆ ಬೆನ್ನಟ್ಟಿ ಹೋಗುತ್ತೇವೆ. ಹೊಟ್ಟೆಗಾಗಿ, ಬಟ್ಟೆಗಾಗಿ ನಮ್ಮ ಈ ಪಯಣ ನಿತ್ಯ ನಿರಂತರ. ಯಾರಿಗೇನೆಯಾದ್ರು ನಮ್ಮ ತುತ್ತಿನ ಚೀಲವನ್ನ ತುಂಬುತ್ತಲೇ ಇರುತ್ತೇವೆ. <br /><br />ಬಾಳಿನ ದಾರಿಯಲ್ಲಿ ಪ್ರೀತಿಯ, ಸ್ನೇಹದ ಸಾಲು ಮರಗಳನ್ನ ಬೆಳಿಸೋಣ. ಕಷ್ಟ ಬಂದಾಗ ಒಂದಿಷ್ಟು ಹೊತ್ತು ಮರದ ನೆರಳಲ್ಲಿ ವಿಶ್ರಾಂತಿ ಪಡೆಯೋಣ. ಮರ ಬೆಳೆದು ಕಾಯಿ ಬಿಟ್ಟು ಅವು ಹಣ್ಣಾದಾಗ ಹಂಚಿ ತಿನ್ನೋಣ.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com2tag:blogger.com,1999:blog-3808699992577162438.post-4948150195756102702008-12-09T12:07:00.000+05:302008-12-09T13:46:38.939+05:30ಹೇಳಿ ಹೋಗು ಕಾರಣನೀನ್ಯಾರೆ? ಹಾಲಿನಂತಹ ನನ್ನ ಮನಸ್ಸಲ್ಲಿ ಜೇನಿನಂತೆ ಒಂದಾಗಲು ಬಂದವಳು ಹೀಗೇಕೆ ಹುಳಿ ಹಿಂಡಿ ಹೋದೆ? ನನ್ನ ಮೈ ಮನವೆಲ್ಲ ತುಂಬಿ ನಿಂತು ಈಗ ಹೀಗೆ ಕಾರಣವಿಲ್ಲದೆ ಹೋದದ್ದಾದರು ಎಲ್ಲಿಗೆ? ಇದ್ದಷ್ಟು ದಿನ ನೀನೇ ನಾನು ನಾನೇ ನೀನು ಎಂದು ನನ್ನ ಮನದಲ್ಲಿ ನೂರಾರು ಹುಚ್ಚು ಭಾವನೆಗಳಿಗೆ ಜನ್ಮ ಕೊಟ್ಟು ಈಗ ನನ್ನ ಭಾವನೆಗಳನೆಲ್ಲಾ ಹೀಗೆ ಅನಾಥವಾಗಿ ಬಿಟ್ಟು ಹೋದದ್ದಾದರು ಯಾಕೆ? ನಾವು ಒಟ್ಟಾಗಿ ಕಳೆದ ಆ ಒಂದೊಂದು ಮಧುರ ಕ್ಷಣಗಳನ್ನು ಮರೆಯುವುದಾದರೂ ಹೇಗೆ? <br /><br />ಎಲ್ಲೋ ಸ್ವತಂತ್ರವಾಗಿ ಹಕ್ಕಿಯಂತೆ ಹಾರಿಕೊಂಡಿದ್ದ ನನ್ನ ಮನಸ್ಸನ್ನ ಈ ಪ್ರೀತಿ ಪ್ರೇಮದ ಪಂಜರದೊಳಗೆ ತಳ್ಳಿದ್ದಾದರು ಯಾಕೆ? ಯಾರ ಹಂಗು ಇಲ್ಲದ ನನ್ನನ್ನು ಈ ಪ್ರೀತಿಯ ಹಂಗಲ್ಲಿ ಕೊಳೆಯಲು ಬಿಟ್ಟು ಹೋಗಲು ನಿನಗೆ ಮನಸ್ಸಾದರು ಹೇಗೆ ಬಂತು? ನೀನಿಲ್ಲದ ನಾನು ಉಸಿರಿಲ್ಲದ ಶವದಂತೆ ಎಂದವಳು ಹೀಗೆ ಏಕಾಯೇಕಿ ನಮ್ಮ ಪ್ರೀತಿಯನ್ನೇ ಕೊಂದು ಬಿಡುವಷ್ಟು ಕ್ರೂರಿಯಾಗಿಬಿಟ್ಟೆಯಾ? ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಹೀಗೆ ಬಾಳಿನುದ್ದಕ್ಕೂ ನನ್ನ ಸುಖ ಸಂತೋಷಗಳಲ್ಲಿ ಭಾಗಿಯಾಗಿರುತ್ತೇನೆ ಅಂದವಳು ನೀನೇನಾ? ನೀನಗೆ ನೆನಪುಗಳೇ ಇಲ್ಲವಾ? ಇದ್ದರು ಅವು ನಿನ್ನನು ಕಾಡದೇ ಸುಮ್ಮನಿದ್ದಾವಾ? ಯಾಕೆ ಹೀಗೆ? ಈ ನೆನಪುಗಳು ನನ್ನನ್ನೇ ಯಾಕೆ ಹೀಗೆ ಕಾಡುತ್ತಿವೆ? <br /><br />ಹೇಳಿ ಹೋಗು ಕಾರಣ ಇಲ್ಲದಿದ್ದರೆ ನಾನು ನಮ್ಮ ಪ್ರೀತಿಯ ಚಿತೆಯಲ್ಲಿ ಅದರಂತೆ ಸುಟ್ಟು ಬುದಿಯಾಗಿ ಬಿಡುವೆ, ಹುಚ್ಚನಂತೆ ಸಿಕ್ಕ ಸಿಕ್ಕ ಮರದ ರೆಂಬೆ ಕೊಂಬೆಗಳ ಮೇಲೆಲ್ಲಾ ನಿನ್ನ ಹೆಸರ ಕೆತ್ತಿ ಬಿಡುವೆ, ದೇವದಾಸನಂತೆ ಬೀರು ಬ್ರ್ಯಾಂಡಿಗಳ ದಾಸನಾಗಿ ಬಿಡುವೆ. ನೀನಿಲ್ಲದೆ ನನಗೆ ನೆನ್ನೆ ನಾಳೆಗಳಿಲ್ಲ, ಬಂಧು ಬಾಂಧವರಿಲ್ಲ, ನೀನಿಲ್ಲದ ನಾ ಉಸಿರಿಲ್ಲದ ಶವವೇ ಸರಿ.<br /><br />ಸ್ಫೂರ್ತಿ: ಬಿ ಆರ್ ಲಕ್ಷ್ಮಣರಾವ್ ಅವರ 'ಹೇಳಿ ಹೋಗು ಕಾರಣ' ಗೀತೆ<br /><br />ಹೇಳಿ ಹೋಗು ಕಾರಣ ಹೋಗುವ ಮೊದಲೂ<br />ನನ್ನ ಬಾಳಿನಿಂದ ದೂರಾಗುವ ಮೊದಲು<br /><br />ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ<br />ಬೆಳಕಾದೆ ಬಾಳಿಗೆ<br />ಇಂದೇಕೆ ಹೀಗೆ ಬೆಳಕನ್ನು ತೊರೆದು<br />ನೀ ಸರಿದೆ ನೆರಳಿಗೆ ?<br />ಇಂದ್ಯಾವ ಬಂಧ ತೊಡರಿದೆ<br />ನಿನ್ನ ಕಾಲಿಗೆ ?<br />ಸುಡುಬೆಂಕಿ ಬೆಳಕು ಉಳಿಯಿತೆ<br />ನನ್ನ ಪಾಲಿಗೆ ?<br /><br />ಸವಿಭಾವಗಳಿಗೆ ನೀ ನಾದ ನೀಡಿ<br />ಜೊತೆಗೂಡಿ ಹಾಡಿದೆ<br />ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು<br />ನೀ ಮೌನ ತಾಳಿದೆ<br />ನೀ ನೆಟ್ಟು ಬೆಳೆಸಿದ ಈ ಮರ<br />ಫಲ ತೊಟ್ಟ ವೇಳೆಗೆ<br />ಹೀಗೇಕೆ ಮುರಿದು ಊರುಳಿದೆ<br />ಯಾವ ದಾಳಿಗೆ ?ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-81379904406523281572008-11-27T10:48:00.001+05:302008-11-27T10:48:51.813+05:30ನಮ್ಮವರು ನಮಗಿಲ್ಲಮುಂಬಯಿಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮುಂಬೈ ಮತ್ತೊಮ್ಮೆ ಜಾತಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ. ನೂರಾರು ಅಮಾಯಕರ ಮಾರಣಹೋಮ ನಡೆದಿದೆ. ಹಿಂಸೆಯ ರುದ್ರ ನರ್ತನಕ್ಕೆ ತಾಯಿ ಭಾರತಿ ಬೆಚ್ಚಿ ಬಿದ್ದಿದ್ದಾಳೆ. ಎಲ್ಲಲ್ಲೂ ಈಗ ಸ್ಮಶಾನ ಮೌನ. ಎಷ್ಟು ದಿನ ಇದು ಹೀಗೆ ನಡೆಯುತ್ತಿರುತ್ತೆ? ಅನ್ಯಾಯಕ್ಕೆ ಕೊನೆಯೇ ಇಲ್ಲವೇ? ಯಾರ ಮೇಲೆ ಈ ಯುದ್ಧ? ಅಮಾಯಕರ ನಿತ್ಯ ಮಾರಣಹೋಮ ನಿಲ್ಲುವುದಾದರು ಎಂದು? ನಮ್ಮವರಿಗೇ ಯಾಕೆ ಇಂತಹ ಸಾವು? ಅಟ್ಟಹಾಸದಿ ಮೆರೆವ ಉಗ್ರರು ಬದುಕಿರಲು ಏನು ಅರಿಯದ ಅಮಾಯಕರು ಮಾತ್ರ ಯಾಕೇ ಸಾಯಬೇಕು? ಇದೇ ನ್ಯಾಯವೆಂದರೆ ಇನ್ನೂ ಅನ್ಯಾಯ ಯಾವುದು?<br /><br />ಒಂದೊಮ್ಮೆ ನಮ್ಮವರೇ ಆಗಿದ್ದವರು ಇಂದು ನಮ್ಮನ್ನೇ ಕೊಲ್ಲುತ್ತಿದ್ದಾರೆ. ಯಾಕೇ ಹೀಗೆ? ನಮ್ಮ ನಡುವಿನ ಪ್ರೀತಿ ಬತ್ತಿ ಹೋಯಿತೆ? ಹಿಂಸೆ ಅಷ್ಟೊಂದು ಪ್ರಿಯವಾಯಿತೇ? ಇನ್ನೊಬ್ಬರ ರಕ್ತ ಹೀರಿ ಆನಂದಿಸುವ ಮೃಗಿಯ ವರ್ತನೆಗೆ ಕೊನೆಯೇ ಇಲ್ಲವೇ? <br /><br />ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ಎಷ್ಟೊಂದು ಸತ್ಯ ಎನ್ನಿಸುತ್ತೆ ಇಂದಿನ ಸಮಾಜದಲ್ಲಿ <br /><br />ನಮ್ಮವರು ನಮಗಿಲ್ಲ ನಮಗೆ<br />ನಾವೆ ಎಲ್ಲ ಕಟ್ಟ ಕಡೆಗೆ<br />ನಂಬಿದವರೇ ನಮಗೆ ಕಾರುವರು<br />ವಿಷದ ಹೊಗೆ ಆಂತರ್ಯದೊಳಗೆ<br /><br />ಹೂವೆಂದು ಅಪ್ಪಿದೆನು ಹಾವಾಗಿ<br />ಬುಸುಗುಟ್ಟಿ ಹೆಡೆಯೆತಿತ್ತು<br />ಒಲವೆಂದು ನಂಬಿದೆನು ಹಗೆತನದ<br />ಹೊಗೆ ಎದ್ದು ಪ್ರಜ್ವಲಿಸಿತು<br /><br />ಹೊಳೆಯಲ್ಲಿ ಮುಳು ಮುಳುಗಿ ಸಾಯುತಿರೆ<br />ದಡದಲಿ ನಿಂತು ನಕ್ಕವರು<br />ಈಜಿ ದಡ ಕೈ ತರಲು ನಮ್ಮವನು<br />ನೀನೆಂದು ಬೆನ್ನ ತಟ್ಟುವರು<br /><br />ಇದು ಲೋಕ ಇದು ಬಾಳು<br />ಇಂತಿರುವುದು ಒಂದು ದೈವದಾಟ<br /><br />ಉಗ್ರರು ತಾಜ್ ಹೋಟೆಲಿನ ಸೆಕ್ಯೂರಿಟಿಯನ್ನ ಬೆದಿಸಿ ಇಷ್ಟು ಸುಲಭವಾಗಿ ಇಂತಹ ಹೇಯ ಕೃತ್ಯ ಮಾಡಿರಲು ನಮ್ಮವರ ಸಹಕಾರನು ಇದ್ದಿರಬಹುದಲ್ಲವೇ? ಹೋಟೆಲಿನ ನೀಲಿ ನಕ್ಷೆಯನ್ನ ಅಲ್ಲಿನ ಸೆಕ್ಯೂರಿಟಿಯಲ್ಲಿನ loop holes'ಗಳನ್ನ ನಮ್ಮವರೇ ಬಾಯಿ ಬಿಟ್ಟಿರಬಹುದಲ್ಲವೇ? ನಮ್ಮವರು ನಮ್ಮ ವಿರುದ್ದವೇ ಹೀಗೆ ಕತ್ತಿ ಮಸೆದರೆ ಹೇಗೆ? ಯಾರನ್ನು ನಂಬುವುದು? ಏನೇ ಆಗಲಿ ನಮ್ಮಲ್ಲಿ ಒಗ್ಗಟ್ಟು ಇರುವವೆರೆಗೂ ಯಾರಿಂದಲೂ ಏನನ್ನು ಮಾಡಲು ಸಾಧ್ಯವಿಲ್ಲ. ದೇಶಕ್ಕಾಗಿ ನಾವು ಭಾರತೀಯರು ಪ್ರಾಣ ಬಿಡಲು ಸದಾ ಸಿದ್ದ. ನೆನ್ನೆಯ ಮುಂಬೈ ಮಾರಣಹೋಮದಲ್ಲಿ ವೀರಮರಣವನ್ನಪ್ಪಿದ ಮೂವರು ದಕ್ಷ ಪೋಲಿಸ್ ಅಧಿಕಾರಿಗಳಿಗೆ ನೂರು ನಮನ. <br /><br />ಅಂದ ಹಾಗೆ ಮುಂಬೈಯಿಂದ ಬಿಹಾರಿಗರನ್ನು ಹೊಡೆದಟ್ಟಿಸುವ ಬದಲು ಅಲ್ಲಿನ ಉಗ್ರರನ್ನು ಹೊಡೆದಟ್ಟಿಸುವ ಬಗ್ಗೆ ಚಿಂತನೆ ನಡೆಯಲಿ. ಜಾತಿ ರಾಜಕಾರಣಕ್ಕೆ ಇನ್ನಾದರೂ ತೆರೆ ಬೀಳಲಿ.ನೆನ್ನೇಯ ಮಾರಣಹೋಮದಲ್ಲಿ ವೀರ ಮರಣಹೊಂದಿದ ಪ್ರತಿಯೊಬ್ಬರ ಆತ್ಮಕ್ಕೂ ಆ ಭಗವಂತನು ಶಾಂತಿಯನ್ನು ನೀಡಲಿ. ಮುಂಬೈ ಮತ್ತೆ ತಣ್ಣಗಾಗಲಿ. ಅಲ್ಲಿ ಶಾಂತಿಯ ಹೂನಗೆ ಅರಳಲಿ.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1tag:blogger.com,1999:blog-3808699992577162438.post-13800141405427967522008-10-28T14:42:00.000+05:302008-10-28T14:54:45.053+05:30ಕನ್ನಡಕ್ಕಾಗಿಕನ್ನಡಿಗರಿಗೆ ಈ ವರ್ಷ ಹಬ್ಬಗಳ ಸಂಭ್ರಮವೋ ಸಂಭ್ರಮ. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಒಟ್ಟೊಟ್ಟಿಗೆ ಬಂದಿವೆ. ಕನ್ನಡದ ಹಬ್ಬಕ್ಕೆ ನನ್ನದೊಂದು ವಿನಂತಿ ದಯವಿಟ್ಟು ನೀವು ಶಾಪಿಂಗ್ ಮಾಲ್'ಗಳಿಗೆ ಹೋದಾಗ ಮಾಲ್ ಅಲ್ಲಿರೋ staff ಜೊತೆಗೆ ಕನ್ನಡದಲ್ಲಿ ಮಾತನಾಡಿ. ಸೇಲ್ಸ್ ಬಾಯ್ ಅಥವಾ ಗರ್ಲ್ಸ್ ಹತ್ತಿರ ಕನ್ನಡದಲ್ಲೇ ವ್ಯವಹರಿಸಿ. ಅಕಸ್ಮಾತ ಅವರಿಗೆ ಕನ್ನಡ ಬರುವದಿಲ್ಲ ಅಂತಾದರೆ ಮಾಲ್'ನ ಮೇಲಾಧಿಕಾರಿ ಹತ್ತಿರ ಹೋಗಿ ಕನ್ನಡ ಮಾತನಾಡುವ ಸೇಲ್ಸ್ ಬಾಯ್'ನ ಡಿಮ್ಯಾಂಡು ಮಾಡಿ, ಕೇಳಿ ಪಡೆಯುವುದು ಗ್ರಾಹಕರ ಹಕ್ಕು. ಹಾಗಾದಾಗ ಕನ್ನಡದ ಹೆಚ್ಚೆಚ್ಚು ಹುಡುಗ ಹುಡುಗಿಯರಿಗೆ ಕೆಲಸ ಸಿಕ್ಕಂತಾಗುತ್ತೆ, ಕೆಲಸ ಪಡೆಯುವ ಮುನ್ನ ಕನ್ನಡ ಕಲಿಯುತ್ತಾರೆ ಹಾಗಾದರೆ the next time when you go for shopping ಕನ್ನಡದಲ್ಲಿ ಮಾತಾಡುತ್ತಿರಲ್ಲವೇ.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com0tag:blogger.com,1999:blog-3808699992577162438.post-10256882924507040622008-09-14T14:21:00.000+05:302008-09-14T16:40:56.240+05:30ಪೂರ್ವಿ(ಮುಂದುವರೆದಿದೆ) <br /><br />"ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ..." ಕಿಶೋರನ ನೆನಪಲ್ಲಿ ನೆನಪಾಗಿ ಹೋಗಿದ್ದ ಪೂರ್ವಿಗೆ ಅವಳ ಮೊಬೈಲ್ ರಿಂಗ್ ಅದಾಗಲೇ ಮತ್ತೆ ವಾಸ್ತವ ಕಂಡಿದ್ದು, ಅವಳ ಕನಸಿನ ರಾಜಕುಮಾರ ಕಂಡು ಕಾಣದಂತೆ ಮಾಯವಾಗಿ ಹೋಗಿದ್ದು, ಅವನು ಕೊಟ್ಟ ಗುಲಾಬಿ ಹೂವು ಇದ್ದು ಇಲ್ಲದಂತಾಗಿದ್ದು. ಮೊಬೈಲಿನ ಸದ್ದಿಗೆ ಎಚ್ಚೆತ್ತು ಕಣ್ಣು ಬಿಡದೆ ದಿಂಬಿನ ಕೆಳಗಿದ್ದ ಮೊಬೈಲಿನ ತೆಗೆದು ಅದರ ಪುಟಾಣಿ ಸ್ಕ್ರೀನ್ ಮೇಲೆ ಕಣ್ಣಾಡಿಸಿದ್ದೆ ಪೂರ್ವಿಗೆ ಆಕಾಶ ಭೂಮಿ ಒಂದಾದ ಅನುಭವ, ಹರಿವ ನದಿಗೆ ಸಮುದ್ರ ಕಂಡಂತಾಗಿ ಸಾವರಿಸಿ ಕೊಂಡು ಎದ್ದು ಕುಂತಳು. ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂದನದಲ್ಲಿ... ಮೊಬೈಲ್ ಇನ್ನೂ ರಿಂಗ್ ಆಗುತ್ತಲೇ ಇತ್ತು. ಕಿಶೂ calling... ಕಿಶೋರನ ಹೆಸರಲ್ಲೇ ಏನೋ ಮಾಯೆ ಇತ್ತು. ಕಾಲ್ recieve ಮಾಡಿ ಹಲೋ ಅಂದಿದ್ದೆ ಆ ಕಡೆಯಿಂದ ಕಿಶೋರ್ ''ಏನು ಪೂರ್ವಿ ಇನ್ನೂ ಮಲಿಗಿದ್ದಿಯಾ atleast ಇವತ್ತಾದ್ರೂ... ಪೂರ್ವಿ ಆಗಲೇ ನಾಲ್ಕು ಗಂಟೆ ಬೇಗ ರೆಡಿ ಆಗಿ ಬಾ... please please ಪೂರ್ವಿ..." ಪೂರ್ವಿಗೆ ಮಾತನಾಡುವದಕ್ಕು ಬಿಡದೆ ಕಿಶೋರ್ ಕಾಲ್ ಕಟ್ ಮಾಡಿದ್ದ. <br /><br />ಹಾಸಿಗೆ ಮೇಲಿಂದ ಎದ್ದು ಗಡಿಯಾರ ನೋಡಿದಾಗ ಅದರಲ್ಲಿ ಇನ್ನೂ 3:30 ಆಗಿರೋದನ್ನ ಕಂಡು ಇವನಿಗೆ ಯಾವಾಗಲು ಆತುರ ಎಂದು ಕೊಂಡು ಫ್ರೆಶ್ ಆಗಲು ಮಂಚಕ್ಕೆ ಹಾಕಿದ್ದ ಟವೆಲ್ ಒಂದನ್ನು ತೆಗೆದುಕೊಂಡು bathroom ಬಾಗಿಲು ಹಾಕಿಕೊಂಡಳು. ಬಾತ್ ರೂಮ್ ಅಲ್ಲಿ hand basin'ನ ನಲ್ಲಿಯಲ್ಲಿ ನೀರು ಬಿಟ್ಟುಕೊಂಡು ಇನ್ನೇನೂ ಮುಖ ತೊಳೆಯಬೇಕು ಅನ್ನೋವಷ್ಟರಲ್ಲಿ ಅವಳ ಕಣ್ಣು ಬೇಸಿನ್ ಮೇಲಿದ್ದ ಕನ್ನಡಿಯಲ್ಲಿ ಬಿತ್ತು, ಆ ಕನ್ನಡಿಯಿಂದ ಕಿಶೋರ್ ಅವಳನ್ನು ಕದ್ದು ನೋಡಿದಂತಾಗಿ ನಕ್ಕು ನಾಚಿಕೊಂಡು ಟವಲ್'ನಲ್ಲಿ ಮುಖ ಮುಚ್ಚಿಕೊಂಡು bathroom'ನಿಂದ ಓಡಿ ಬಂದಳು. ಆಮೇಲೆ ಅದು ಕೇವಲ ಭ್ರಮೆ ಅನ್ನಿಸಿದರೂ ಆ ಕ್ಷಣ ಎಷ್ಟೊಂದು ಮಧುರವೆನ್ನಿಸಿತ್ತು, ಮತ್ತೆ ಹೋಗಿ ಫ್ರೆಶ್ ಆಗಿ ಬಂದು ಇಂತಹ ಸ್ಪೆಷಲ್ occasion'ಗೆ ಹಾಕಿಕೊಂಡು ಹೋಗಲು ಒಂದು ಒಳ್ಳೆ ಬಟ್ಟೆ ಇಲ್ಲ ಅಂತ ಹಳಹಳಿಸಿದಳು, ಹಸಿರು hmm ನೋ, ಹಳದಿ hmm ನೋ, ಕೆಂಪು hamm ಇದು ಓಕೆ ಆದ್ರೆ ಯಾವುದೊ ಸಿನೆಮಾದಲ್ಲಿ ಕೆಂಪು ಬಟ್ಟೆ ತೊಟ್ಟ ಹೀರೋಯಿನ್'ನ ಗೂಳಿ ಬೆನ್ನಟ್ಟಿಕೊಂಡು ಹೋದ ದೃಶ್ಯ ನೆನಪಾಗಿ ಓಹ್ ಗಾಡ್ its too dangerous ಅಂದು ಕೊಂಡು ಕೊನೆಗೆ ಕಳೆದವಾರ ಕಲ್ಯಾಣಿ ಜೊತೆಗೆ westside'ಗೆ ಹೋದಾಗ ಕಿಶೋರ್ ಸೆಲೆಕ್ಟ್ ಮಾಡಿದ ಆಕಾಶ ನೀಲಿಯ ಚೂಡಿನೆ ಸರಿ ಎನ್ನಿಸಿ ಸುಕ್ಕು ಸುಕ್ಕಾಗಿದ್ದ ಡ್ರೆಸ್'ನ ಕ್ಷಣಾರ್ದದಲ್ಲಿ ಇಸ್ತ್ರಿ ತಿಕ್ಕಿದಳು.<br /><br />ತಿಳಿ ಆಕಾಶ ನೀಲಿ ಬಣ್ಣದ ಆ ಡ್ರೆಸ್ ಮೇಲೆ ಅಷ್ಟೇ ತಿಳಿಯಾದ ಗುಲಾಬಿ ವರ್ಣದ ಹೂಗಳಿದ್ದವು ಅದರ ಅಂದವನ್ನು ಇನ್ನೂ ಹೆಚ್ಚಿಸುವಂತಹ ಅಷ್ಟೇ ತಿಳಿಯದ ಗುಲಾಬಿ ವರ್ಣದ ದುಪ್ಪಟ್ಟ ಮತ್ತು ಬಾಟಮ್, ದುಪ್ಪಟ್ಟದ ಮೇಲೆ ಟಾಪ್'ನ ವಿರುದ್ಧವಾಗಿ ಆಕಾಶ ನೀಲಿಯ ಬಣ್ಣದ ಹೂಗಳಿದ್ದವು. ಆ ಚೂಡಿ ತೊಟ್ಟು ಪೂರ್ವಿಯ ಕೆನ್ನೆಗಳು ಗುಲಾಬಿ ರಂಗೆರಿದ್ದವು, ಹಣೆಯ ಮೇಲೆ ತಿಳಿ ಗುಲಾಬಿಯ ಚಿಕ್ಕ ಬಿಂದುವೊಂದು ರಾರಾಜಿಸುತ್ತಿತ್ತು, ತಿಳಿ ಗುಲಾಬಿಯ ಬಳೆಗಳು ಸುಸ್ವರ ಹಾಡಿದ್ದವು, ಬೆಳ್ಳಿಯ ಕಲ್ಗೆಜ್ಜೆಗಳು ರಿಂಗನಿಸಿದ್ದವು, ಅಲ್ಮರದಲ್ಲಿದ್ದ ಡ್ರೆಸ್'ಗೆ ಮ್ಯಾಚ್ ಆಗುವಂತಹ ತಿಳಿ ನೀಲಿ ಬಣ್ಣದ vanity bag ಬಗಲೆರಿತ್ತು.<br /><br />ರೆಡಿ ಆಗಿ ಮತ್ತೆ ಗಡಿಯಾರ ನೋಡಿದಾಗ ಗಂಟೆ 4:30 ಕಿಶೋರನ ಸ್ಥಿತಿ ನೆನಪಾಗಿ ಕಾಲ್ಕಿತ್ತಳು, ಬಾಗಿಲು ತೆಗೆದು ಹೊರಗಡೆ ಬರಲು ಆಕಾಶ ಮೋಡ ಕಟ್ಟಿ ನಿಂತಿತ್ತು ಜೊತೆಗಿರಲಿ ಅಂತ ಮತ್ತೆ ಒಳಗೆ ಹೋಗಿ ಛತ್ರಿ ಹಿಡಿದು ಕೊಂಡು ಬಂದಳು, ರೂಮ'ನ ಬೀಗ ಹಾಕಿ ಚಿಲಕಕ್ಕೆ ಪೋಸ್ಟ್ ಇಟ್ ಅಲ್ಲಿ "ಕಲ್ಯಾಣಿ ಗಣೇಶ ದೇವಸ್ಥಾನಕ್ಕೆ ಹೋಗ್ತಿದ್ದೀನಿ..." ಅಂತ ಬರೆದಿಟ್ಟು ಲಗು ಬಗೆಯಿಂದ ಮೆಟ್ಟಲಿಳಿದು ಹತ್ತಿರದ BMTC busstop ತಲುಪುವಸ್ಟರಲ್ಲಿ ಸಾಕು ಸಾಕಾಗಿತ್ತು ಆದರು ಏನೋ ಸಂತೋಷ್ ಅದೇನೋ ಉತ್ಸಾಹ. ಬಸ್ಸ್ಟಾಪ್ ಅಲ್ಲಿ ಬಸ್ ಬಂದಿದ್ದೆ ಬಸ್ ಹತ್ತಿದಳು ಪೂರ್ವ ಜನ್ಮದ ಪುಣ್ಯವೋ ಏನೋ ಬಸಲ್ಲಿ ಸೀಟ್ ಸಿಕ್ಕಿತ್ತು, ಟಿಕೆಟ್ ಟಿಕೆಟ್ ಅಂತ ಬಂದ ಕಂಡಕ್ಟರ್'ನ ಕೈಗೆ ಹತ್ತು ರೂಪಾಯಿ ಕೊಟ್ಟು ಗಣೇಶ ದೇವಸ್ಥಾನ ಪಾರ್ಕ್ ಅಂದಿದ್ದೆ ಕಂಡಕ್ಟರ್ ಟಿಕೆಟ್ ಹರೆಯುತ್ತ ಅದರ ಹಿಂದೆ ಐದು ರೂಪಾಯಿ ಅಂತ ಗಿಚಿ ಅವಳ ಕೈಗಿಟ್ಟ, ಪೂರ್ವಿಗೆ ಬಸ್ ಇಳಿಯ ಬೇಕಾದರೆ ಇದನ್ನು ಬೇರೆ ನೆನಪು ಇಟ್ಕೊಬೇಕಲ್ಲ ಅಂತ ಕೋಪ ಬಂದಂತಾಗಿ ಟಿಕೆಟನ್ನು ಬ್ಯಾಗಲ್ಲಿ ಇಟ್ಟು ಕೊಂಡಳು. ಕಿವಿಗೆ headphone ಸಿಕ್ಕಿಸಿ ಕೊಂಡು ರೇಡಿಯೋ ಮಿರ್ಚಿ ಕೇಳುತ್ತಾ ನೆನಪಿನಂಗಳಕ್ಕೆ ಜಾರಿದಳು, ರೇಡಿಯೋ "ನನಗೂ ದೇವರಂತ ಗೆಳೆಯಬೇಕು..." ಅಂತ ಹಾಡುತ್ತಲಿತ್ತು.ಪೂರ್ವಿ ಮತ್ತೆ ರಾಜಕುಮಾರನ ಮಡಿಲಲ್ಲಿ ಮಲಗಿದ್ದಳು, ಹುಲ್ಲಿನ ತೆಳು ಹಾಸಿಗೆಯ ಮೇಲೆ ತನ್ನನ್ನೇ ತಾನು ಮರೆತಿದ್ದಳು ಅಷ್ಟರಲ್ಲಿ ಕಂಡಕ್ಟರ್ ಗಣೇಶ ದೇವಸ್ಥಾನ ಅಂತ ಕಿರುಚಿದ್ದಾ, ಕಂಡಕ್ಟರ್'ನ ಕರ್ಕಶ ಧ್ವನಿಗೆ ಪೂರ್ವಿ ಬೆಚ್ಚು ಬಿದ್ದಿದ್ದಳು, ಮತ್ತೆ ಕಿಶೋರನ ನೆನಪಾಗಿ ಲಗು ಬಗೆಯಿಂದ ಐದು ರೂಪಾಯಿಯನ್ನು ಮರೆತು ಬಸ್ನಿಂದ ಇಳಿದಿದ್ದಳು. <br /><br />ಪಾರ್ಕ್ನ entrance gate ಹತ್ತಿರ ನಿಂತು ಕಿಶೋರನಿಗೆ ಫೋನ್ ಮಾಡಿದಳು, ಆ ಕಡೆಯಿಂದ ಕಿಶೋರ್ "ಎಲ್ಲಿದ್ದಿಯಾ ಪೂರ್ವಿ ನಾನು ನೀನಗೊಸ್ಕರ ನಾಲ್ಕು ಗಂಟೆ ಇಂದ ಕಾಯುತ್ತ ಇದ್ದೀನಿ ಗೊತ್ತಾ" ಅಂದಿದ್ದ ಅದಕ್ಕೆ ಪೂರ್ವಿ "ಇಲ್ವೋ ಇಲ್ಲೇ ಪಾರ್ಕ್ gate ಹತ್ತಿರ ಇದ್ದೀನಿ ನೀನು ಎಲ್ಲಿ ಇದ್ದಿಯಾ " ಅಂದಿದ್ದಳು ಅದಕ್ಕೆ ಕಿಶೋರ್ "ಅದೇ ಲೆಫ್ಟ್ ಅಲ್ಲಿ ಎರಡನೇ ಬೆಂಚ್" ಅಂದಿದ್ದ, ಅದಕ್ಕೆ ಪೂರ್ವಿ ಸರಿ ನೀನು ಅಲ್ಲೆ ಇರು ನಾನು ಇಗಲೇ ಬಂದೆ ಅಂತ ಫೋನ್ ಕಟ್ ಮಾಡಿ ಪಾರ್ಕ್'ನ ಒಳ ನಡೆದಳು. <br /><br />ಪೂರ್ವಿಯನ್ನು ನೋಡಿ ಕಿಶೋರನ ಮಾತೆ ನಿಂತು ಹೋಗಿದ್ದವು, ಬಾ ಪೂರ್ವಿ ಅಂತ ತನ್ನ handkerchief ಇಂದ ಬೆಂಚನ್ನು ವರೆಸುತ್ತ ಅವಳತ್ತ ನೋಡಿದ. ಪೂರ್ವಿ ಕಣ್ಣಲ್ಲೇ ಮಾತನಾಡಿದ್ದಳು ಅವನ ಕೈ ಹಿಡಿದು ಇಟ್ಸ್ ಓಕೆ ಅಂತ ಅವನ ಪಕ್ಕಕ್ಕೆ ಕುಳಿತಳು, ಅವಳು ಕುಳಿತ ಆ ಕ್ಷಣ ಅವಳು ಹಚ್ಚಿಕೊಂಡಿದ್ದ ಸುಗಂಧ ಧ್ರವ್ಯದ ವಾಸನೆ ಸುತ್ತಲಿನ ಪರಿಸರದಲ್ಲಿ ಹರಡಿ ಸ್ವಚ್ಚನೆಯ ಭಾವ ಹೊಮ್ಮಿತ್ತು. <br /><br />ಕಿಶೋರನಿಗೆ ಪುರ್ವಿಯ ಕಣ್ಣಲ್ಲಿ ಕಣ್ಣನಿಟ್ಟು ನೋಡುವಷ್ಟು ಧೈರ್ಯ ಉಳಿದಿರಲಿಲ್ಲ, ಕುಂತಲ್ಲೇ ನೆಲವನ್ನೇ ನೋಡ್ತಾ ಇದ್ದ. ಕಿಶೋರನ ತೊಳಲಾಟ ನೋಡದೆ ಪೂರ್ವಿ "ಅಯ್ಯೋ ತುಂಟ ಫೋನ್ ಮಾಡಿ ನನ್ನನ್ನ ಇಲ್ಲಿಗೆ ಕರೆಯಿಸಿ ಕೊಳ್ಳೋದಕ್ಕೆ ಆಗುತ್ತೆ ಇಲ್ಲಿ ನನ್ನ ಜೊತೆ ಮಾತನಾಡುವದಕ್ಕೆ ಎಂತಹ ಸಂಕೋಚ, ನೀನು ಹೇಳಲಿಲ್ಲ ಅಂದರೆ ನಾನೇ ಹೇಳುವೆ ಇಗೋ ನೋಡು " ಅಂತ ತನ್ನಲ್ಲೇ ತಾನೆಂದುಕೊಂಡಳು. ಕೊನೆಗೂ ಕಿಶೋರ್ ಧೈರ್ಯ ಮಾಡಿ ಪೂರ್ವಿ ನಾನು ನೀನಗೆ ಒಂದು ಮುಖ್ಯವಾದ ವಿಷಯ ಹೇಳಬೇಕು, ಅದು ನನ್ನ ಜೀವನದ ಮುಖ್ಯ ವಿಷಯ, ನನ್ನ ಮುಂದಿನ ಜೀವನ ನಿನ್ನ ಒಪ್ಪಿಗೆಯ ಮೇಲೆ ನಿಂತಿದೆ please ಪೂರ್ವಿ ಇಲ್ಲ ಅನ್ನಬೇಡ ಎಂದು ಕಣ್ಣಂಚಿನಲ್ಲಿ ಬಂದ ಕಣ್ಣಿರನ್ನು ವರೆಸಿಕೊಂಡನು. ಪೂರ್ವಿಗೆ ಒಂದು ಕ್ಷಣ ಅವನನ್ನು ತಬ್ಬಿಕೊಂಡು ಹುಚ್ಚಾ ಅದಕ್ಕೇಕೆ ಕಣ್ಣಿರು ನಾನೆಂದು ನಿನ್ನವಳೇ ಎಂದು ಹೇಳೋಣ ಎನ್ನಿಸಿದರೂ ಸಾವರಿಸಿಕೊಂಡು ಅದೇನು ಹೇಳು ಕಿಶೋರ್ ಎಂದಳು, ಅದಕ್ಕೆ ಕಿಶೋರ್ ಅವಳ ಕಣ್ಣುಗಳಿಂದ ತಪ್ಪಿಸಿಕೊಳ್ಳುತ್ತ ಪೂರ್ವಿ ನನಗೆ ಗೊತ್ತಿಲ್ಲದಂಗೆ ನಾನು ಕಲ್ಯಾಣಿನ ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತ ಇದ್ದೀನಿ ಆದರೆ ಅವಳ ಹತ್ತಿರ ಹೇಳುವಷ್ಟು ಧೈರ್ಯ, ಶಕ್ತಿ ನನ್ನಲ್ಲಿ ಇಲ್ಲ, please ಪೂರ್ವಿ ಅವಳಿಗೆ ನೀನೆ ಹೇಗಾದರು ಮಾಡಿ ಹೇಳು, ನನ್ನ ಪ್ರೀತಿನ ಉಳಿಸು ಪೂರ್ವಿ, ಅವಳು ನಿನ್ನ ಮಾತು ಕಂಡಿತವಾಗಿಯು ಕೇಳುತ್ತಾಳೆ, ಇಲ್ಲ ಅನ್ನಬೇಡ ಪೂರ್ವಿ please, ನನ್ನ ಪ್ರೀತಿಯ ಕೂಸನ್ನ ನಿನ್ನ ಮಡಿಲಲ್ಲಿ ಹಾಕಿದ್ದೇನೆ ಅದನ್ನು ಉಳಿಸುವುದು ಬೆಳೆಸುವುದು ಈಗ ನಿನ್ನ ಕೈ ಅಲ್ಲಿದೆ ಪೂರ್ವಿ please please ಅಂತ ಕಿಶೋರ್ ಚಿಕ್ಕ ಮಗುವಿನ ತರಹ ಪೂರ್ವಿಯ ಮಡಿಲಲ್ಲಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.<br /><br />ಪೂರ್ವಿಗೆ ಸಿಡಿಲು ಬಡಿದಂತಾಗಿ ಒಂದು ಕ್ಷಣ ಅವಳ ಜೀವನವೇ ನಿಂತ ನೀರಾಗಿತ್ತು. ಚಂದಿರನ ಹತ್ತಿರಕ್ಕೆ ಹೋಗಿ ಅವನನ್ನ ಮುಟ್ಟದೆ ಬಂದಂತ ಅನುಭವ. ಪೂರ್ವಿಗೆ ಕಣ್ಣು ತಪ್ಪಿಸಿ ರವಿಯು ಮೋಡಗಳ ಹಿಂದೆ ಮರೆಯಾಗಿದ್ದ . ಪೂರ್ವಿ ಮತ್ತೊಮ್ಮೆ ಪೂರ್ವಿಯಾಗಿರಲಿಲ್ಲ, ಎಲ್ಲಾ ಇದ್ದು ಏನು ಇಲ್ಲದಂತೆ, ಹಕ್ಕಿಗಳು ತಮಗಿನ್ನೇನು ಕೆಲಸವೆಂಬಂತೆ ಗೂಡು ಸೇರುತ್ತಲಿದ್ದವು... <br /><br />(ಮುಗಿಯಿತು)ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com3tag:blogger.com,1999:blog-3808699992577162438.post-87898834929085976962008-08-30T12:08:00.000+05:302008-08-30T13:36:11.638+05:30ಪೂರ್ವಿಕಿಶೋರನ ಮೆಸೇಜ್ ಬಂದಾಗಿನಿಂದ ಪೂರ್ವಿ ಪೂರ್ವಿಯಾಗಿರಲಿಲ್ಲ, ಅವಳಲ್ಲಿ ಏನೋ ಹೊಸತನ ಉಕ್ಕಿ ಹರಿಯುತಿತ್ತು, ಮನಸ್ಸು ಹಗುರವಾಗಿತ್ತು ಪ್ರೀತಿಯ ಗಾಳಿಗೆ ಸಿಕ್ಕ ಸೂತ್ರವಿಲ್ಲದ ಗಾಳಿಪಟದಂತೆ. ಮನದಲ್ಲಿ ಸಂಭ್ರಮ ಮನೆ ಮಾಡಿತ್ತು. ಮನಸ್ಸು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು.ಪೂರ್ವಿ ತನ್ನನ್ನು ತಾನೇ ನಂಬಲಾರದಂತಾಗಿ ಮತ್ತೆ ಮತ್ತೆ ತನ್ನ ಮೊಬೈಲಿನಲ್ಲಿ displayಯಾದ ಕಿಶೋರನ messageನ್ನ ಓದಿದಳು. "ಪೂರ್ವಿ, ನಿನ್ನೊಂದಿಗೆ ಮನಸ್ಸು ಬಿಚ್ಚಿ ತುಂಬ ಮಾತನಾಡುವದಿದೆ ಬಹಳ ದಿನಗಳಿಂದ ನನ್ನಲ್ಲೇ ಮುಚ್ಚಿಟ್ಟ ಒಂದು ಮುಖ್ಯವಾದ ವಿಷಯವನ್ನ ಹೇಳುವದಿದೆ, ನನ್ನ ಮನಸ್ಸೆಂಬ ಗರ್ಭದಲ್ಲಿ ಚಿಗುರಿದ ಈ ಪ್ರೇಮದ ಕುಡಿಯನ್ನ ನನ್ನೊಳಗೆ abort ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ please ಸಂಜೆ ಗಣೇಶನ ದೇವಸ್ಥಾನದ ಪಕ್ಕಕಿರುವ parkಗೇ ಬಂದು ಬಿಡು, please ಪೂರ್ವಿ". ಅವಳ ಇಡೀ ಜಗತ್ತನ್ನೇ ಒಂದು ಕ್ಷಣ ನಿಲ್ಲಿಸುವ ಶಕ್ತಿ ಹೊಂದಿದ್ದ ಸಾಲುಗಳವು. <br /> <br />ಪೂರ್ವಿಗೆ ಕಿಶೋರನ ಪರಿಚಯವಾದದ್ದು ಅವಳ ಸರ್ವಸ್ವವೇ ಆಗಿದ್ದ ಅವಳ ಬಾಲ್ಯದ ಗೆಳತಿ ಕಲ್ಯಾಣಿಯಿಂದ. ಬದುಕೆಂಬ ಬಿರುಗಾಳಿಗೆ ಸಿಕ್ಕಿ ಈಗ ಹೀಗೆ ಬೆಂಗಳೂರೆಂಬ ಮಹಾನಗರದಲ್ಲಿ ತಂದೆ ತಾಯಿಯರನ್ನ ಬಿಟ್ಟು ಪೂರ್ವಿ ಮತ್ತು ಕಲ್ಯಾಣಿ ಒಂದೇ PGಯಲ್ಲಿ ಇರುತ್ತಾ ನಾಲ್ಕು ವರ್ಷಗಳಾಗಿದ್ದವು. ಪೂರ್ವಿಗೆ ಕಲ್ಯಾಣಿ, ಕಲ್ಯಾಣಿಗೆ ಪೂರ್ವಿ ಎಂದೂ ಬೇರೆಯವರ ತಂಟೆಗೆ ಹೋಗಲಾರದ ಜೀವಗಳವು. ಬಾಲ್ಯದಲ್ಲಿ ಎಲ್ಲದರಲ್ಲೂ ಜೊತೆಯಾಗಿದ್ದ ಪೂರ್ವಿ ಮತ್ತು ಕಲ್ಯಾಣಿಯನ್ನ ಬೆಂಗಳೂರು ಮೊದಲ ಬಾರಿಗೆ ದಿನದ ಎಂಟರಿಂದ ಒಂಬತ್ತು ಗಂಟೆ ದೂರಮಾಡಿತ್ತು, ಅವರ ಆಸೆಯ ವಿರುದ್ಧವಾಗಿ ಇಬ್ಬರಿಗೂ ಬೇರೆ ಬೇರೆ ಕಡೆ ಕೆಲಸ ಸಿಕ್ಕಿತ್ತು. ಆದರು ಇವರಿಬ್ಬರೂ ಮಾತ್ರ chat, mail, sms, mobile ಅಂತ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕಾಲನಿಗೆ ಸೆಡ್ಡು ಹೊಡೆದಿದ್ದರು.<br /><br />ಕಲ್ಯಾಣಿ ಕೆಲಸ ಮಾಡುತ್ತಿದ್ದ MNCಯಲ್ಲಿ ಕಿಶೋರ್ team lead ಆಗಿದ್ದವನು. ಕಲ್ಯಾಣಿಯ ಶ್ರದ್ದೆ, ಮುಗ್ದತೆ, ಕೆಲಸದೆಡೆಗಿನ ಅವಳ dedication ಕಿಶೋರನನ್ನ ಅವಳತ್ತ ಆಕರ್ಷಿಸಿದ್ದವು, ಆಕರ್ಷಣೆ ಪರಿಚಯವಾಗಿತ್ತು, ಪರಿಚಯ ಸ್ನೇಹವಾಗಿತ್ತಷ್ಟೆ. ಕಲ್ಯಾಣಿಗು ಕೆಶೋರನೆಂದರೆ, ಅವನು ಕೆಲಸ ಮಾಡುವ ರೀತಿ ನೀತಿಯಲ್ಲಾ ಅಚ್ಚು ಮೆಚ್ಚು, ಅವಳಿಗೂ ಅವನಾಗುವ ಇಷ್ಟ ಅವನಂತೆ ಶ್ರದ್ದೆಯಿಂದ ಕೆಲಸ ಮಾಡುವ ಆಸೆ. ಅವನಂತೆ careerನಲ್ಲಿ ಸಾಧಿಸುವ ಹುಚ್ಚು. carrer ಎಂಬ ladderನ ತುತ್ತ ತುದಿಗೆ ನಿಲ್ಲುವ ಹಂಬಲ. <br /><br />ಹೀಗೆ ಕಿಶೋರನ ಕೆಲಸದತ್ತ ಅಕರ್ಷಿತವಾಗಿದ್ದ ಕಲ್ಯಾಣಿ ರಾತ್ರಿಯಲ್ಲ ಪೂರ್ವಿಯ ಹತ್ತಿರ ಕಿಶೋರನ ಗುಣಗಾನ ಮಾಡುತ್ತಿದ್ದಳು. ಕಿಶೋರ್ ಹಂಗೇ ಹಿಂಗೇ you know he is brilliant, ಪೂರ್ವಿ ಇವತ್ತು ಏನಾಯ್ತು ಗೊತ್ತ client raise ಮಾಡಿದ್ದ critical issue ಒಂದನ್ನು ಕಿಶೋರ್ within a fraction of second ಅಲ್ಲಿ fix ಮಾಡಿಬಿಟ್ಟ ಕಣೇ ಅದೂ without debugging ಕಣೇ ಹ್ಯಾಟ್ಸ್ ಆಪ್ ಟು ಕಿಶೋರ್. ಅವನ ಹತ್ತಿರ ಯಾವುದಾದರು problem ಕೇಳಿದರೆ ಸಾಕು ಯಾವ fileನಲ್ಲಿ ಯಾವ lineನಲ್ಲಿ defect ಇದೇ ಅಂತ ಹೇಳ್ತಾನೆ . He is genious ಕಣೇ, ಅಪ್ಪಾ ಅವನನ್ನ no one can beat in coding ಪೂರ್ವಿ, ಅಂತೆಲ್ಲಾ ಕಿಶೋರನ ಹೊಗಳಲು ಕಲ್ಯಾಣಿ ಹತ್ತಿರ ಶಬ್ದಗಳೇ ಇರುತ್ತಿರಲಿಲ್ಲ. <br /><br />ಪೂರ್ವಿಗೆ ರಾತ್ರಿ ನಿದ್ದೆ ಬರೋವರೆಗೂ ಕಿಶೋರ್ ಹೀಗಿರಬಹುದೇ ಹಾಗಿರಬಹುದೇ ಅಂತ ಕಲ್ಪನೆ ಮಾಡುವದೊಂದೇ ಕೆಲಸ, ಯೋಚನೆ ಮಾಡುತ್ತ ನಿದ್ರೆಗೆ ಜಾರಿದ ಅನುಭವನು ಪೂರ್ವಿಗೆ ಗೊತ್ತಾಗುತ್ತಿರಲಿಲ್ಲ, ಪೂರ್ವಿಯ ಕನಸಲ್ಲಿ ಕುದರೆ ಏರಿ ಬರುತ್ತಿದ್ದ ರಾಜಕುಮಾರ ಈಗೀಗ ಸ್ಪಷ್ಟವಾಗಿ ಕಂಡಂತ ಅನುಭವ. ಪೂರ್ವಿಗೆ ಕಿಶೋರ್ ನನ್ನ ನೋಡಿರದಿದ್ದರೂ ಅವನು ಪರಿಚಿತವೆನಿಸಿದ್ದ, ಅವನ ಜೊತೆಗೆ ಮಾತಾಡಿದ ನೆನಪು, ಗುದ್ದಾಡಿದ ನೆನಪು, ಕಿಶೋರ್ ದಿನ ಕಳೆದಂತೆ ಅವಳ ಮನೆ ಮನಸ್ಸನ್ನ ತುಂಬಿ ನಿಂತಿದ್ದ. ಅವಳ ಕನಸಿನ ರಾಜಕುಮಾರ ಕನಸಿನಾಚೆಗೂ ಬಂದಂತ ಅನುಭವ, ಅವಳ ಕೈ ಹಿಡಿದು ಮುತ್ತಿಟ್ಟ ಮಧುರ ಸಿಂಚನ. ಪೂರ್ವಿ ಮೊದಲ ಬಾರಿಗೆ ಪ್ರೀತಿಯ ಕಡಲಲ್ಲಿ ಮಿಂದಿದ್ದಳು. ಅವನು ಯಾರು ಹೇಗಿದ್ದಾನೆ ಅನ್ನೋ ಗೊಡೆವೆಗು ಹೋಗದೆ. <br /><br />ಪೂರ್ವಿ ಮತ್ತು ಕಲ್ಯಾಣಿಯ ಜಗತ್ತಿಗೆ ಮತ್ತೊಬರ ಪ್ರವೇಶವಾಗಿತ್ತು. ಕಲ್ಯಾಣಿಯಿಂದಾಗಿ ಪೂರ್ವಿಗೆ ಕಿಶೋರನ ದರ್ಶನ ಭಾಗ್ಯ ಅಂದುಕೊಂಡಕ್ಕಿಂತ ಬೇಗ ಸಿಕ್ಕಿತ್ತು, ಪರಿಚಯ ಸ್ನೇಹವಾಗಲು ಬಹಳ ದಿನಗಳು ಬೇಕಾಗಲಿಲ್ಲ. ಕಿಶೋರನು ಪೂರ್ವಿಯ ಸ್ನಿಗ್ಧ ಸೌಂದರ್ಯಕ್ಕೆ ಬೆಕ್ಕಸ ಬೆರಗಾಗಿದ್ದ, ಮೊದಲ ನೋಟದಲ್ಲಿ ನಿಮ್ಮನ್ನ ನೋಡಿದರೆ ಹುಣ್ಣಿಮೆ ಚಂದ್ರನು ಹೊಟ್ಟೆ ಕಿಚ್ಚು ಪಡುತ್ತಾನೆ ಎಂದಿದ್ದ, ಪೂರ್ವಿಗೆ ಆಗ ಆಕಾಶ ಮೂರೇ ಗೇಣು.<br /><br />ಪೂರ್ವಿ, ಕಲ್ಯಾಣಿ, ಕಿಶೋರ್ ಅವರಿಗೆ ಅರಿವಿಲ್ಲದಂತೆ ಅವರ ಮನಗಳು ಒಂದಾಗಿದ್ದವು, weekend ಬಂದರೆ ಸಾಕು ಒಬ್ಬರನೊಬ್ಬರು ಬಿಟ್ಟಿರುತ್ತರಿಲಿಲ್ಲ. ಕಿಶೋರನ ಹಾಸ್ಯ ಪ್ರಜ್ಞೆಗೆ , ಅವನ caring ಮನೋಭಾವಕ್ಕೆ ಪೂರ್ವಿ ಶರಣಾಗಿದ್ದಳು. <br /><br /><br /> (ಇನ್ನೂ ಇದೆ)ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com3tag:blogger.com,1999:blog-3808699992577162438.post-13699367383128094592008-07-27T20:26:00.000+05:302008-07-27T21:02:04.156+05:30ಗಿಳಿಯೂ ಪಂಜರದೊಳಿಲ್ಲಪಂಜರದಿಂದ ಮತ್ತೊಂದು ಗಿಳಿ ಹಾರಿಹೋಗಿತ್ತು, ಕಳೆದ ಎರಡು ವರ್ಷದಿಂದ ನನಗೆ ಗೊತ್ತಿರದಂತೆ ನನ್ನ ಮನಸ್ಸಿಗೆ ಹತ್ತಿರವಾದ friend, philosopher, guide, mentor, guru and well wisher ಹೀಗೆ ಪಂಜರದಿಂದ ಏಕಾಏಕಿ ಹಾರಿ ಹೋದ ಅನುಭವ ಕಾಡ್ತಾನೆ ಇದೆ. <br /><br />ಜೀವನವನ್ನೋ ರೈಲು ಪ್ರಯಾಣದಲ್ಲಿ ಕಾರಣವಿಲ್ಲದೇ ಕೆಲವರು ಹತ್ತಿರವಾಗಿಬಿಡುತ್ತಾರೆ ಹಾಗೇ ಕಾರಣ ಹೇಳದೆ ಹೋಗಿಬಿಡುತ್ತಾರೆ. ಮೂರು ದಿನದ ಈ ಪ್ರಯಾಣದಲ್ಲಿ ನಮ್ಮ ನಿಲ್ದಾಣ ಬಂದಾಗ ಖುಷಿ ಖುಷಿ ಇಂದ ವಿದಾಯ ಹೇಳಿಬಿಡುತ್ತೇವೆ, ಆದರೆ ಕಳೆದು ಹೋದ ಆ ನೆನಪುಗಳು ಮಾತ್ರ ಮನಸನ್ನು ಹುರಿದು ತಿನ್ನುತ್ತವೆ. <br /><br />"ಜಾಣೆ ತು ಯಾ ಜಾಣೆ ನಾ" ದಲ್ಲಿ ಜಯ್ ಅದಿತಿಗೆ ಹೇಳುವಂತೆ ಜೀವನದಲ್ಲಿ ಒಮ್ಮೊಮ್ಮೆ ಹೀಗೆ ಯಾರೋ ನಮ್ಮವರೆನಿಸಿ ಬಿಡುತ್ತಾರೆ ಹಾಗೇನೇ ಒಮ್ಮೊಮ್ಮೆ ಅವರು ನಮ್ಮನ್ನ ಅಗಲಿದಾಗ ಅದೊಂದು ಸುಂದರ ಕನಸು ಎನ್ನಿಸಿಬಿಡುತ್ತೆ, ಎಷ್ಟೊಂದು ನಿಜವಲ್ಲವೇ? <br /><br />ಹಾಗೇ ನಿಲ್ದಾಣ ಒಂದರಲ್ಲಿ ನಾನು ಇವರನ್ನು ಬಿಟ್ಟು ಇಳಿದಾಗ I knew I will miss him ಅಂತ but ಅದು ಸೃಷ್ಟಿಯ ನಿಯಮ. ಹಳೇ ನೆನುಪುಗಳ ಬೆಚ್ಚನೆಯ ಚಾದರದಲ್ಲಿ ಮಲಗ ಬಯಸುವ ಮನಸನ್ನ ಬಡಿದೆಬ್ಬಿಸಿ ಮುಂದಿನ ಪ್ರಯಾಣಕ್ಕೆ ಅನಿಗೊಳಿಸುತ್ತಿದ್ದೇನೆ.<br /><br />ಪಂಜರದಿಂದ ಗಿಳಿ ಹಾರಿ ಹೋಗಿದ್ದರು ಮತ್ತೆ ಬಂದೆ ಬರುತ್ತೆ ಅನ್ನೋ ವಿಶ್ವಾಸ ಅದಮ್ಯವಾಗಿದೆ. ಗಿಳಿಯೊಂದಿಗೆ ಮಾತನಾಡಿದ ಪ್ರತಿ ಮಾತು ಮನದ ಮುಗಿಲಿನಲ್ಲಿ ಮೆಘಗಳಾಗಿ ಮಳೆ ತಂದಿವೆ. ಮಳೆಗಾಲದ ಚಳಿಯಲ್ಲಿ ನೆನಪುಗಳು ಬೆಚ್ಚಗಿನ ಹೊದಿಕೆಯಾಗಿವೆ. ನೆನಪುಗಳ ಮಾತು ಮಧುರವಾಗಿದೆ. <br /><br />ಪ್ರಪಂಚ ಚಿಕ್ಕದಾಗಿದೆ ಮತ್ತೆ ನಾವು ಸಿಗುತ್ತೇವೆ ಅನ್ನೋ ವಿಶ್ವಾಸವಿದೆ. ನಮ್ಮ ಸ್ನೇಹ ಹೀಗೆ ಚಿರಕಾಲವಿರುತ್ತೆ ಅನ್ನೋ ನಂಬಿಕೆಯಂತು ಯಾವತ್ತು ಇದೆ.ವಿಜಯ್ ಅಬ್ಬಿಗೇರಿhttp://www.blogger.com/profile/08041867206636472917noreply@blogger.com1