Sunday, April 12, 2009

ಇದು ಬದುಕು ಇದು ಸತ್ಯ - 2

ಶ್ರಾವಣಿ ಎಲ್ಲೂ ಹೋಗಿಲ್ಲ. ಅವಳು ನನ್ನಲ್ಲೆ ಇದ್ದಾಳೆ. ನಾನಾಡುವ ಪ್ರತಿಯೊಂದು ಮಾತಿನಲ್ಲೂ, ನಾನೋಡುವ ಪ್ರತಿಯೊಂದು ವಸ್ತುವಿನಲ್ಲೂ, ನಾನು ಉಸಿರಾಡಿಸುವ ಪ್ರತಿ ಉಸಿರಿನಲ್ಲೂ, ನನ್ನ ಪ್ರತಿ ಕಣ ಕಣದಲ್ಲೂ. ಅವಳಾಡಿದ ಪ್ರತಿ ಮಾತು ನನಗಿನ್ನೂ ನೆನಪಿವೆ, ಅವಳಿಟ್ಟ ಪ್ರತಿ ಹೆಜ್ಜೆಯು ನನ್ನ ಹೃದಯದಲ್ಲಿ ಅಚ್ಚ್ಚಾಗಿ ಉಳಿದಿವೆ, ಅವಳೆದೆಯ ಒಂದೊಂದು ಬಡಿತ ಇವತ್ತಿಗೂ ನನಗೆ ಕೇಳಿಸುತ್ತಿದೆ.

ಶ್ರಾವಣಿ ನನ್ನ ಜೀವನದಲ್ಲಿ ಶ್ರಾವಣದಂತೆ ಬಂದಿದ್ದಳು. ಹೊಸತನದ ಗಾಳಿ ಹೊತ್ತು ಪ್ರೀತಿಯ ಹಬ್ಬವನ್ನೇ ತಂದಿದ್ದಳು. ನಮ್ಮಿಬ್ಬರದ್ದು arranged ಮದುವೆಯಾಗಿತ್ತಾದರು ನಾವಿಬ್ಬರೂ ಯಾವ ಪ್ರೇಮಿಗಳಿಗಿಂತಲೂ ಕಡಿಮೆ ಇರಲಿಲ್ಲ. ವಯಸ್ಸಲ್ಲಿ ನನಗಿಂತ ಆರು ವರ್ಷ ಚಿಕ್ಕವಳಾಗಿದ್ದರು ನನಗಿಂತಲೂ ಹೆಚ್ಚು ಹೆಚ್ಚು ವಿಷಯ ತಿಳಿದು ಕೊಂಡಿದ್ದಳು. ರೂಪ, ಗುಣ, ಬುದ್ದಿವಂತಿಕೆ ಹೀಗೆ ಎಲ್ಲದರಲ್ಲೂ ನನಗಿಂತ ಮುಂದಿದ್ದಳು. ಪ್ರತಿಯೊಂದು ವಿಷಯ, ವಸ್ತು, ವ್ಯಕ್ತಿಗಳ ಬಗ್ಗೆ ಅದು ಹೀಗೆನೇ ಅಂತ predict ಮಾಡಿ ಬಿಡುತ್ತಿದ್ದಳು.

ಮದುವೆ ಆಗಿ ಒಂದೇ ತಿಂಗಳಲ್ಲಿ ನಮ್ಮ ಇಡೀ ಮನೆಯ ಚಿತ್ರಣ ಬದಲಾಗಿಬಿಟ್ಟಿತ್ತು. ಅಮ್ಮನಿಗೆ ಕಳೆದ ಎರಡು ವರ್ಷಗಳಿಂದ ಹುಡುಕುತ್ತಿದ್ದ ತನ್ನ ಮುದ್ದಿನ ಸೊಸೆ ಸಿಕ್ಕ ಸಂಭ್ರಮ. ಅಡುಗೆ ಮನೆಯಲ್ಲಿ ಇಷ್ಟು ದಿವಸ ಒಂಟಿಯಾಗಿ ಕೆಲಸ ಮಾಡುತಿದ್ದವಳಿಗೆ ಈಗ ಶ್ರಾವಣಿ ಜೊತೆಯಾಗಿದ್ದಳು. ಅಮ್ಮ ತನ್ನ 35 ವರ್ಷಗಳ experienceನಲ್ಲಿ ಕಲಿತು ಕೊಂಡಿದ್ದ ಪ್ರತಿಯೊಂದು cooking tipsಗಳನ್ನ ತನ್ನ ಮುದ್ದಿನ ಸೊಸೆಗೆ ಕಲಿಸಿ ಕೊಡುವುದರಲ್ಲಿ busy'ಯಾಗಿಬಿಟ್ಟಿದ್ದಳು ಪ್ರತಿಫಲವಾಗಿ ಮನೆಯಲ್ಲಿ ಪ್ರತಿ ದಿನವು ಮ್ರುಸ್ಟಾನ್ನಾ ಭೋಜನ. ಅಪ್ಪನಿಗೂ ಅಷ್ಟೆ ಹೆಣ್ಣು ಮಕ್ಕಳೆಂದರೆ ಅದೇನೋ ವಿಶೇಷ ಪ್ರೀತಿ. ಅವಳಲ್ಲಿ ಮಗಳನ್ನ ಕಂಡಿದ್ದರು. ಪ್ರತಿ ದಿನ ಬೆಳಿಗ್ಗೆ ಅವರು easy chair'ನಲ್ಲಿ ಕುಳಿತು ಬಿಸಿ ಬಿಸಿ ಟೀ ಕುಡಿಯುತ್ತಲಿದ್ದರೆ ಎದುರಿಗೆ ಶ್ರಾವಣಿ ಅವತ್ತಿನ newspaper ಓದುತ್ತ ಕುಳಿತಿರಬೇಕು. ಒಟ್ಟಾರೆ ಇಡೀ ಮನೆ ಬದಲಾಗಿಬಿಟ್ಟಿತ್ತು. ಅಪ್ಪ ಇಲ್ಲಿಯ ತನಕ TV volume ಅನ್ನು ಹೆಚ್ಚಿಗೆ ಇಡಲು ಬಿಡದವರು ಈಗ ಹಾಡೆಂದರೆ ಶ್ರಾವಣಿಗೆ ಇಷ್ಟ ಅಂತ ಅವಳಿಗೆ ಅಡುಗೆ ಮನೆಯಲ್ಲೂ ಹಾಡು ಕೇಳಿಸಲಿ ಅಂತ TV volume ಅನ್ನು ಪಕ್ಕದ ಬೀದಿಯವರೆಗೆ ಕೇಳುವಷ್ಟು increase ಮಾಡಿದ್ದರು. ಅವಳು ತವರಿಗೆ ಹೋದರೆ ಮನೆಯಲ್ಲಿ ಸ್ಮಶಾನ ಮೌನ. ಅವಳು ಹೋದ ಒಂದೇ ಗಂಟೆಗೆ ಅಪ್ಪ ಫೋನ್ ಮಾಡಿ ಮನೆಗೆ ಬಂದು ಬಿಡು ಮಗಳೇ ಎಂದು ಮಕ್ಕಳಂತೆ ಅವಳ ದಾರಿ ಕಾಯುತ್ತ ಕುಳಿತುಕೊಳ್ಳುತ್ತಿದ್ದರು.

ಆದರೆ ನಾನು ಮಾಡಿದ್ದಾದರೂ ಏನು? ನನ್ನ ಸುಖ ಸಂತೋಷಕ್ಕೆ ನಾನೇ ಕಲ್ಲು ಹಾಕಿಬಿಟ್ಟೆ. ಸ್ವರ್ಗದಂತಿದ್ದ ನನ್ನ ಜೀವನವನ್ನ ನಾನೇ ನರಕವನ್ನಾಗಿಸಿಕೊಂಡೆ? ನನ್ನ ಈ ತಪ್ಪಿಗೆ ಕ್ಷಮೆ ಇದೆಯಾ? ನಾನು ಪಾಪಿ. ಹೌದು ನಾನೊಬ್ಬ ಪಾಪಿ. ನನ್ನ ಶ್ರಾವಣಿಯನ್ನ ನಾನೇ ಕೊಂದು ಬಿಟ್ಟಿದ್ದೆ.

(ಇನ್ನೂ ಇದೆ)